ನಗರಸೇವಕಿಯ ಆಕ್ರಮಣಕಾರಿ ಧೋರಣೆಯ ನಂತರ ತಪ್ಪೊಪ್ಪಿಕೊಂಡ ಸಿಬ್ಬಂದಿ

ಬದ್ಲಾಪುರ – ಇಲ್ಲಿನ ‘ಅಯ್ಯಂಗಾರ್ ಫ್ರೆಶ್ ಕೇಕ್’ ಬೇಕರಿಯ ಕೇಕ್ನಲ್ಲಿ ಇಲಿಯ ಹಿಕ್ಕಿ ಪತ್ತೆಯಾಗಿದೆ. ನಗರಸೇವಕಿ ಹರ್ಷಾಲಿ ಗಾಯಕ್ವಾಡ್ ಅವರ ಜೊತೆ ಈ ಘಟನೆ ನಡೆದಿದೆ. ನಗರಸೇವಕಿ ಗಾಯಕ್ವಾಡ್ ಬೇಕರಿಯವರನ್ನು ತರಾಟೆಗೆ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ, ಅಲ್ಲಿ ಇರಿಸಲಾಗಿದ್ದ ಖಾರಿಗಳ ಮೇಲೆ ಇಲಿಗಳು ಓಡಾಡುತ್ತಿರುವುದು ಮತ್ತು ಕೇಕ್ ತಯಾರಿಸಲು ಬಳಸುವ ಪಾತ್ರೆಗಳನ್ನು ಶೌಚಾಲಯದ ಕಮೋಡ್ ಮೇಲೆ ಇಟ್ಟಿರುವುದು ಕಂಡುಬಂದಿದೆ. ಆಗ ಅಲ್ಲಿದ್ದ ಬೇಕರಿ ಸಿಬ್ಬಂದಿ ಇದು ಇಲಿಯ ಹಿಕ್ಕಿಯಲ್ಲ, ‘ಚೊಕೊಚಿಪ್’ ಎಂದು ಹೇಳಿದರು; ಆದರೆ ಗಾಯಕ್ವಾಡ್ ಅವರು ‘ಈ ಕೇಕ್ ಅನ್ನು ಪರೀಕ್ಷೆಗೆ ಕಳುಹಿಸುತ್ತೇನೆ’ ಎಂದು ಹೇಳಿದಾಗ ಸಿಬ್ಬಂದಿ ತಮ್ಮ ತಪ್ಪು ಒಪ್ಪಿಕೊಂಡರು. ಈ ಬೇಕರಿಯ ವಿರುದ್ಧ ಆಹಾರ ಮತ್ತು ಔಷಧ ಆಡಳಿತ ಮಂಡಳಿಗೆ ದೂರು ನೀಡಲು ನಗರಸೇವಕಿ ನಿರ್ಧರಿಸಿದ್ದಾರೆ. ‘ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುವ ಈ ಬೇಕರಿಯನ್ನು ಮುಚ್ಚಬೇಕು’ ಎಂದು ಆಗ್ರಹಿಸಲಾಗುತ್ತಿದೆ.
ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises
ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ
ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ‘ಸಾರ್ವಜನಿಕ ಕಾಕಾ ಪ್ರಶಸ್ತಿ’ ಪ್ರದಾನ !
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!