ಜಂತರಮಂತರನ ಆಂದೋಲನ ಮತ್ತು ಔತಣಕೂಟದ ವೆಚ್ಚವನ್ನು ಯಾರು ಭರಿಸಿದವರು ?, ಎಂಬುದು ಹೊರಬರಬೇಕು ! - ನ್ಯಾಯವಾದಿ ಮಹೇಶ ಜೇಠಮಲಾನಿಯವರ ಬೇಡಿಕೆ

ನವ ದೆಹಲಿ – ಜಂತರಮಂತರನಲ್ಲಿ ಕಾಕ್ರೋಚ್ ಜನತಾ ಪಕ್ಷದ ಹಲವು ದಿನಗಳ ಕಾಲ ನಡೆದ ಪ್ರತಿಭಟನೆಗಳ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರನ್ನು ರಾಜೀನಾಮೆ ನೀಡಲು ಬಾಧ್ಯಗೊಳಿಸಲಾಯಿತು. ಅನಂತರ ಈ ವಿಜಯದ ಸಂಭ್ರಮಕ್ಕಾಗಿ ಈಗ ಕಾಕ್ರೋಚ್ ಜನತಾ ಪಕ್ಷವು ಪಂಚತಾರಾ ಹೋಟೆಲ್ನಲ್ಲಿ ಔತಣಕೂಟವನ್ನು ಆಯೋಜಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
"Cockroach Janta Party" hosts a lavish party at a 5-star hotel featuring music & dance!
Advocate Mahesh Jethmalani demands accountability:
👉 "Who funded the Jantar Mantar protests and this grand party? The truth must come out!"
While personal freedom matters, celebrating a… pic.twitter.com/sKsAdWWX5l
— Sanatan Prabhat (@SanatanPrabhat) July 27, 2026
ಈ ವಿಡಿಯೋದಲ್ಲಿ ಸಂಭ್ರಮಾಚರಣೆಯ ವಾತಾವರಣ ಕಾಣಿಸುತ್ತಿದ್ದು, ಅಲ್ಲಿ ನೃತ್ಯ ಮತ್ತು ಗಾಯನವೂ ನಡೆಯುತ್ತಿದೆ. ಈ ವಿಡಿಯೋವನ್ನು ಹಿರಿಯ ನ್ಯಾಯವಾದಿಗಳಾದ ಮಹೇಶ ಜೇಠಮಲಾನಿ ಯವರು ತಮ್ಮ ‘ಎಕ್ಸ್’ ಖಾತೆಯಿಂದ ಹಂಚಿಕೊಂಡಿದ್ದಾರೆ. ಅವರು ಇದನ್ನು ಪ್ರಶ್ನಿಸುತ್ತಾ, ಕಾಕ್ರೋಚ್ ಜನತಾ ಪಕ್ಷದ ಜಂತರಮಂತರನ ಆಂದೋಲನದ ವೆಚ್ಚವನ್ನು ಯಾರು ಭರಿಸಿದರು? ಪ್ರಯಾಣ, ಆಹಾರ ಮತ್ತು ವಸತಿ, ಹಾಗೆಯೇ ಈ ಔತಣಕೂಟದ ವೆಚ್ಚವನ್ನು ಯಾರು ಭರಿಸಿದರು? ಈ ಪಕ್ಷದ ಹಿಂದೆ ಯಾರಿದ್ದಾರೆ?, ಎಂಬುದರ ತನಿಖೆ ನಡೆಯಬೇಕು” ಎಂದು ಹೇಳಿದ್ದಾರೆ.
Seriously?
The CJP leadership throwing a victory party at a hotel! After Delhi witnessed days of violence, these so-called youth activists switched on the music and began dancing.More serious questions:
Who funded the travel, food, accommodation, equipment and logistics… pic.twitter.com/KSl4GIu0gr— Mahesh Jethmalani (@JethmalaniM) July 27, 2026
ಆತ್ಮಹತ್ಯೆಯ ಹೆಸರಿನಲ್ಲಿ ಆಂದೋಲನ ಮಾಡುವವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ ! – ಭಾಜಪ ನಾಯಕ ಅಮಿತ ಮಾಲವೀಯ
ಭಾಜಪ ನಾಯಕರಾದ ಅಮಿತ ಮಾಲವೀಯರವರು ಪೋಸ್ಟ್ ಮಾಡಿ,
Everyone deserves to unwind and celebrate after a hard day’s work. But there is a time and a place for it.
When a movement is presented as a fight for justice for students, including those whose deaths by suicide are invoked as its moral foundation, scenes of dancing and what… pic.twitter.com/vIz35PtYcn
— Amit Malviya (@amitmalviya) July 27, 2026
ಪ್ರತಿಯೊಬ್ಬರಿಗೂ ಶ್ರಮದ ನಂತರ ವಿಶ್ರಾಂತಿ ಪಡೆಯುವ ಮತ್ತು ಸಂಭ್ರಮಿಸುವ ಹಕ್ಕಿದೆ; ಆದರೆ ಅದಕ್ಕಾಗಿ ಸಮಯ ಮತ್ತು ಸ್ಥಳಕ್ಕೂ ಮಹತ್ವವಿರುತ್ತದೆ. ವಿದ್ಯಾರ್ಥಿಗಳಿಗಾಗಿ ನ್ಯಾಯದ ಹೋರಾಟವೆಂದು ಒಂದು ಆಂದೋಲನವನ್ನು ಮಾಡಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಅದರ ನೈತಿಕ ಅಡಿಪಾಯವೆಂದು ಉಲ್ಲೇಖಿಸಲಾಗುತ್ತದೆ, ಅದರ ಬೆನ್ನಲ್ಲೇ ಸಂಭ್ರಮಾಚರಣೆ ಮಾಡುವಂತಹ ದೃಶ್ಯಗಳು ಅನೇಕ ಜನರಿಗೆ ಅಸಂವೇದನಾಶೀಲವಾಗಿ ಕಾಣಿಸಬಹುದು, ಎಂದು ಹೇಳಿದ್ದಾರೆ.
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!