ನೇಪಾಳ: ಮುಸ್ಲಿಂರಿಂದ ಹಿಂದೂಗಳ ಮೇಲೆ ದಾಳಿ! – ಪೊಲೀಸರ ಗುಂಡೇಟಿಗೆ ಓರ್ವ ಹಿಂದೂ ಯುವಕ ಬಲಿ

ಕಾಠ್ಮಂಡು (ನೇಪಾಳ) – ನೇಪಾಳ- ಭಾರತ ಗಡಿಗೆ ಹೊಂದಿಕೊಂಡಿರುವ ಸುನ್ಸರಿ ಜಿಲ್ಲೆಯಲ್ಲಿ ಮತಾಂಧ ಮುಸ್ಲಿಂರು ನಡೆಸಿದ ಗಲಭೆಯ ವೇಳೆ ಪೊಲೀಸರು ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಹಿಂದೂ ಯುವಕ ಮೃತಪಟ್ಟಿದ್ದು, ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಲಭೆಯ ನಂತರ ಆಡಳಿತ ಮಂಡಳಿಯು ಕೆಲವು ಪ್ರದೇಶಗಳಲ್ಲಿ ಅನಿರ್ದಿಷ್ಟಾವಧಿ ನಿರ್ಬಂಧ ಹೇರಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜುಲೈ ೨೬ ರ ರಾತ್ರಿ ದೇವ್‌ಗಂಜ್ ಗ್ರಾಮೀಣ ಪೌರಸಭೆಯ ಕಪ್ತಾನ್‌ಗಂಜ್ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಂರು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆಗ ಧ್ವನಿವರ್ಧಕಗಳ (ಲೌಡ್‌ಸ್ಪೀಕರ್) ಬಳಕೆ ಮತ್ತು ಧಾರ್ಮಿಕ ಧ್ವಜಗಳನ್ನು ಹಾರಿಸುವ ಕುರಿತು ವಿವಾದ ಪ್ರಾರಂಭವಾಯಿತು. ಈ ವಾಗ್ವಾದವು ಮುಂದೆ ಹಿಂಸಾಚಾರಕ್ಕೆ ತಿರುಗಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ಗುಂಡು ಹಾರಿಸಿದಾಗ, ೨೪ ವರ್ಷದ ಓಂ ಪ್ರಕಾಶ್ ಮೆಹ್ತಾ ಎಂಬುವವರು ಮೃತಪಟ್ಟರು. ಸುನ್ಸರಿ ಜಿಲ್ಲೆಯು ನೇಪಾಳದ ಆಗ್ನೇಯ ಭಾಗದಲ್ಲಿದ್ದು, ಭಾರತದ ಬಿಹಾರ ರಾಜ್ಯದ ಗಡಿಗೆ ತೀರ ಹತ್ತಿರದಲ್ಲಿದೆ. ಈ ಪ್ರದೇಶವು ಎರಡೂ ದೇಶಗಳ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಮಾರ್ಗವಾಗಿದೆ.

ಸಂಪಾದಕೀಯ ನಿಲುವು

  • ನೇಪಾಳದಲ್ಲಿ ಶೇ. ೮೧% ರಷ್ಟು ಹಿಂದೂಗಳಿದ್ದಾರೆ, ಕೇವಲ ಶೇ. ೫% ರಷ್ಟು ಮಾತ್ರ ಮುಸ್ಲಿಂರಿದ್ದಾರೆ. ಆದರೂ ಅವರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆಂದರೆ ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ!
  • ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಇಸ್ಲಾಮಿಕ್ ದೇಶಗಳಲ್ಲಿರುವ ಹಿಂದೂಗಳು ಎಂದಾದರೂ ಮುಸ್ಲಿಂರ ಮೇಲೆ ದಾಳಿ ಮಾಡುವ ಧೈರ್ಯ ತೋರಿಸಲು ಸಾಧ್ಯವೇ? ಒಂದು ವೇಳೆ ಹಾಗೆ ಮಾಡಿದರೆ, ಅವರು ಜೀವಂತವಾಗಿ ಉಳಿಯುವರೇ?