ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ ಚಂದಿಗಡನಲ್ಲಿರುವ ಆಸ್ತಿ ಜಪ್ತಿ

ಚಂದಿಗಡ್ – ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ `ಸಿಖ್ ಫಾರ್ ಜಸ್ಟಿಸ್’ನ ನಾಯಕ ಗುರುಪತವಂತ ಸಿಂಹ ಪನ್ನುವಿನ ಇಲ್ಲಿನ ಮನೆ ಹಾಗೂ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾದೆ. ಇದರೊಂದಿಗೆ ಅಮೃತಸರದಲ್ಲಿನ ಖಾನಾಕೊಟ ಗ್ರಾಮದಲ್ಲಿದ್ದ ಪನ್ನುವಿನ ಕೃಷಿ ಭೂಮಿಯನ್ನೂ ಜಪ್ತು ಮಾಡಲಾಗಿದೆ. ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಪನ್ನು ಕೆನಡಾದಲ್ಲಿನ ಹಿಂದೂಗಳಿಗೆ ಕೆನಡಾ ಬಿಡುವಂತೆ ಬೆದರಿಕೆ ಹಾಕಿದ್ದಾನೆ. ಸದ್ಯ ಪನ್ನು ಅಮೇರಿಕಾದಲ್ಲಿ ಇದ್ದಾನೆ. (ಭಾರತವು ಅಮೇರಿಕಾಗೆ ಪನ್ನುವನ್ನು ಭಾರತಕ್ಕೆ ಒಪ್ಪಿಸುವಂತೆ ಮನವಿ ಮಾಡಬೇಕು ! – ಸಂಪಾದಕರು)