ಅನಂತನಾಗ್‌ನಲ್ಲಿ ಮುಂದುವರಿದ ಘರ್ಷಣೆ !

ಅನಂತನಾಗ್ (ಜಮ್ಮು ಕಾಶ್ಮೀರ) – ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಡ್ರೋನ್ ಗಳನ್ನು ಬಳಸಲಾಗುತ್ತಿದ್ದು, ಈಗ ರಾಕೆಟ್ ಲಾಂಚರ್ ಗಳನ್ನೂ ಬಳಸಲಾಗುವುದು. ಈ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಒಬ್ಬ ಕರ್ನಲ್ ಮತ್ತು ಮೇಜರ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್‌ನ ಉಪ ಆಯುಕ್ತರು ಹುತಾತ್ಮರಾಗಿದ್ದಾರೆ. ಇದರೊಂದಿಗೆ ಇಬ್ಬರು ಯೋಧರು ವೀರ ಮರಣವನ್ನು ಹೊಂದಿದ್ದಾರೆ.