ದೆಹಲಿಯಲ್ಲಿ ಮುಸಲ್ಮಾನ ಯುವಕನ ದಾಳಿಯಲ್ಲಿ ಒಬ್ಬ ಹಿಂದೂ ಯುವಕನ ಸಾವು, ಮತ್ತೊಬ್ಬನಿಗೆ ಗಾಯ !

ನವ ದೆಹಲಿ – ದೆಹಲಿಯಲ್ಲಿನ ಕಾಲಿಂದಿ ಕುಂಜ ಪ್ರದೇಶದಲ್ಲಿ ಶಾಹರುಖ ಎಂಬ ಯುವಕನು ಶಿವಂ ಹಾಗೂ ಕಮಲ ಕಿಶೋರ ಎಂಬ ಇಬ್ಬರು ಸಹೋದರರ ಮೇಲೆ ಚಾಕುವಿನಿಂದ ದಾಳಿ ಮಾಡಿದನು. ಇದರಲ್ಲಿ ಕಮಲ ಕಿಶೋರ ಸಾವನ್ನಪ್ಪಿದ್ದು ಶಿವಂ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರು ಶಾಹರುಖನನ್ನು ಬಂಧಿಸಿದ್ದು ಅವರ ನಡುವಿನ ವಾದವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಹತ್ಯೆಯ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಇಟ್ಟಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಬಹುಸಂಖ್ಯಾತ ದೇಶದ ರಾಜಧಾನಿಯಲ್ಲಿಯೇ ಹಿಂದೂಗಳು ಅಸುರಕ್ಷಿತರಾಗಿದ್ದರೆ ಇನ್ನೂ ಬೇರೆ ಕಡೆಗಳಲ್ಲಿನ ಸ್ಥಿತಿ ಹೇಗಿರಬಹುದು ? ಎಂಬುದು ಗಮನಕ್ಕೆ ಬರುತ್ತದೆ ! ಇಂತಹ ಘಟನೆಗಳ ಬಗ್ಗೆ ಜಾತ್ಯತೀತರು ತುಟಿ ಬಿಚ್ಚುವುದಿಲ್ಲ !