ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ‘ಲವ್ ಜಿಹಾದ್’ !

ದಾವೂದ್ ‘ರಾಹುಲ್’ ಎಂದು ಹೇಳಿ ಹಿಂದೂ ದಲಿತ ಹುಡುಗಿಯೊಂದಿಗೆ ದೇವಸ್ಥಾನದಲ್ಲಿ ಮದುವೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ದಾವೂದ್ ಹೆಸರಿನ ಮುಸ್ಲಿಂ ಯುವಕನೋರ್ವ ತಾನು ರಾಹುಲ್ ಎಂದು ಹೇಳಿ ಒಬ್ಬ ಹಿಂದೂ ದಲಿತ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ಬಳಿಕ ದಾವೂದ್ ಸಂತ್ರಸ್ತೆಯನ್ನು ಮಾಲಿಪುರದ ಹಿಂದೂ ದೇವಸ್ಥಾನದಲ್ಲಿ ಹಿಂದೂ ಪದ್ಧತಿಯನುಸಾರ ವಿವಾಹವಾದನು.

ಸಂತ್ರಸ್ತೆ ಹಿಂದೂ ಹುಡುಗಿ ನೀಡಿರುವ ಮಾಹಿತಿಯನುಸಾರ, ಮದುವೆಯ ನಂತರ, ದಾವೂದ್ ಕುಟುಂಬದವರು ಮುಸ್ಲಿಂ ಪದ್ಧತಿಯನ್ನು ಆಚರಿಸುತ್ತಿರುವುದು ಅವಳ ಗಮನಕ್ಕೆ ಬಂದಿತು. ಆಗಲೇ ಅವಳಿಗೆ ‘ರಾಹುಲ್’ ನಿಜವಾಗಿ ‘ದಾವೂದ್’ ಎಂದು ತಿಳಿಯಿತು. ತದನಂತರ ದಾವೂದ್ ಆಕೆಯನ್ನು ತೀವ್ರವಾಗಿ ಥಳಿಸಲು ಪ್ರಾರಂಭಿಸಿದನು. ದಾವೂದ್ ಅವಳನ್ನು ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದನು. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಪೊಲೀಸರು ಇಂತಹ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿರುವಂತೆ ತೋರಿಸುತ್ತಿದ್ದರೂ, ಅವರು ಪ್ರತ್ಯಕ್ಷದಲ್ಲಿ ಎಷ್ಟು ಅಪರಾಧಿಗಳಿಗೆ ಶಿಕ್ಷೆಯಾಗಲು ಪ್ರಯತ್ನಿಸಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ. ಆದ್ದರಿಂದಲೇ ಮುಸ್ಲಿಂ ಮತಾಂಧರು ಯಾವುದೇ ಹೆದರಿಕೆಯಿಲ್ಲದೆ ಇಂತಹ ಕೃತ್ಯಗಳನ್ನು ಮಾಡುತ್ತಾರೆ ! – ಸಂಪಾದಕರು)

ಸಂಪಾದಕರ ನಿಲುವು

* ಮತಾಂಧ ಮುಸ್ಲಿಮರು ಲವ್ ಜಿಹಾದ್ ವಿರೋಧಿ ಕಾನೂನನ್ನು ಧಿಕ್ಕರಿಸುತ್ತಿರುವಾಗ ನಿಷ್ಕ್ರಿಯ ಪೊಲೀಸರಿಗೆ ನಾಚಿಕೆಗೇಡು !

* ‘ದಲಿತರು-ಮುಸ್ಲಿಮರು ಸಹೋದರರು’ ಎಂದು ಹೇಳುವವರು ಇದರ ಬಗ್ಗೆ ಏನು ಹೇಳುವುದಿದೆ ?