
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೆಯೇ ಮಾಡಿರುವ ಕಾರ್ಯಗಳನ್ನು ಸನಾತನ ಎಂಬ ಪದ ಬಳಸಿ ಅಪಕೀರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯದ ಬಳಿಕವೂ ಸನಾತನ ಕೊನೆಗೊಂಡಿಲ್ಲ ವಿರೋಧಿಸುವವರು ಮರೆತಿದ್ದಾರೆ. ಇಂತಹ ತುಚ್ಛ ಜನರು ಸನಾತನವನ್ನು ಏನು ಅಂತ್ಯಗೊಳಿಸಲಿದ್ದಾರೆ ?, ಎನ್ನುವ ಶಬ್ದಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದಯನಿಧಿ ಅವರನ್ನು ಟೀಕಿಸಿದ್ದಾರೆ.
जो सनातन नहीं मिटा था रावण के अहंकार से…
जो सनातन नहीं डिगा था कंस की हुंकार से…
जो सनातन नहीं मिटा था बाबर और औरंगजेब के अत्याचार से…
वह सनातन इन तुच्छ सत्ता परजीवी जीवों से क्या मिट पाएगा! pic.twitter.com/2zsdsuoFwb— Yogi Adityanath (@myogiadityanath) September 7, 2023
ಸೂರ್ಯನ ಮೇಲೆ ಉಗುಳುವ ಯತ್ನ !
ಯೋಗಿ ಆದಿತ್ಯನಾಥ್ ತಮ್ಮ ಮಾತನ್ನು ಮುಂದುವರಿಸಿ, ಜನರು ತಮ್ಮ ಮೂರ್ಖತನವನ್ನು ಸಾಬೀತುಪಡಿಸಲು ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸುತ್ತಿರುತ್ತಾರೆ; ಆದರೆ, ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸಿದರೆ, ಉಗುಳು ಸ್ವತಃ ಅವರ ಮುಖದ ಮೇಲೆಯೇ ಬೀಳುತ್ತದೆಯೆಂದು ಅವರಿಗೆ ತಿಳಿಯುವುದಿಲ್ಲ. ರಾವಣ, ಹಿರಣ್ಯಕಶಿಪು, ಕಂಸ ಮುಂತಾದ ರಾಕ್ಷಸರು ಕೂಡ ಈಶ್ವರನ ಶಕ್ತಿಗೆ ಸವಾಲೆಸೆದರು, ಅವರೆಲ್ಲರಿಗೂ ಸೋಲಿನ ಧೂಳಿನ ರುಚಿ ನೋಡಬೇಕಾಯಿತು. ಸನಾತನ ಧರ್ಮ ಎಂದಿಗೂ ನಾಶವಾಗದ ಸತ್ಯವಾಗಿದೆ. ಇದು ದೇವರ ಕೃಪೆಯೇ ಆಗಿದೆ. ಸನಾತನ ಧರ್ಮಕ್ಕೆ ಶಕ್ತಿ ಸಿಗುತ್ತಿರುವ ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!