ಓಂಕಾರೇಶ್ವರ ದೇವಸ್ಥಾನದಲ್ಲಿ ಸಂತರಿಗೆ ಭೂಮಿಯ ಒಳಗೆ ಶ್ರೀ ಹನುಮಂತನ ಮೂರ್ತಿ ಇರುವ ಸ್ವಪ್ನದೃಷ್ಟಾಂತ !

ಪ್ರತ್ಯಕ್ಷ ಉತ್ಖನನದಲ್ಲಿ ಮೂರ್ತಿ ಪತ್ತೆ !

ವಿದಿಶಾ (ಮಧ್ಯಪ್ರದೇಶ) – ಓಂಕಾರೇಶ್ವರ ದೇವಸ್ಥಾನದಲ್ಲಿನ ಸಂತರಿಗೆ ಭೂಮಿಯಲ್ಲಿ ಶ್ರೀ ಹನುಮಂತನ ಮೂರ್ತಿ ಇರುವುದು ಸ್ವಪ್ನದೃಷ್ಟಾಂತವಾಯಿತು. ಅದರ ಪ್ರಕಾರ ಅಲ್ಲಿಯ ಧರಗ ಸ್ಥಳೀಯ ಜನರು ಉತ್ಖನನ ಮಾಡಿದರು. ‘ಉತ್ಕನನದಲ್ಲಿ ಶ್ರೀ ಹನುಮಂತನ ಎರಡ ರಿಂದ ಎರಡುವರೆ ಅಡಿ ಎತ್ತರದ ಮೂರ್ತಿ ದೊರೆತಿದೆ,’ ಎಂದು ಸಂತರು ಹೇಳಿದರು. ಉತ್ಕನನದ ಸಮಯದಲ್ಲಿ ಮೂರ್ತಿ ಕಾಣಿಸಿತು. ಆದರೂ ಈ ಸಮಯದಲ್ಲಿ ಸ್ಥಳೀಯ ಪೊಲೀಸ್, ಸರಕಾರ, ಮುಜರಾಯಿ ಇಲಾಖೆ ಮತ್ತು ಅರಣ್ಯ ಇಲಾಖೆ ಇವರ ಸಮನ್ವಯದ ಆಭಾವದಿಂದ ಪೊಲೀಸರು ಉತ್ಕನನದ ಕಾರ್ಯ ನಿಲ್ಲಿಸಿದರು. ಸಂತರ ಸ್ವಪ್ನ ದೃಷ್ಟಾಂತದ ಪ್ರಕಾರ, ಭೂಮಿಯಲ್ಲಿ ಮೂರ್ತಿ ಸಿಕ್ಕಿರುವುದರಿಂದ ಧರಗ ಗ್ರಾಮದಲ್ಲಿನ ಜನರು ಆ ಸ್ಥಳದಲ್ಲಿ ಪೂಜೆ ಅರ್ಚನೆ ಮಾಡಲು ಆರಂಭಿಸಿದ್ದಾರೆ.

(ಸೌಜನ್ಯ – Amar Ujala MP-CG)