ನೇಪಾಳದಲ್ಲಿನ ಚೀನಾದ ರಾಯಭಾರಿಯ ಭಾರತ ವಿರೋಧಿ ಹೇಳಿಕೆ ಪ್ರಕರಣ

ನವ ದೆಹಲಿ – ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ನೇಪಾಳದ ವಿದೇಶಾಂಗ ಸಚಿವ ಎನ್.ಪಿ. ಸೌದ ಇವರು, ನಾವು ಚೀನಾದ ರಾಯಭಾರಿಗೆ ನೋಟಿಸ್ ನೀಡಿದ್ದೇವೆ, ಎಂದು ಹೇಳಿದರು.
೧. ನೇಪಾಳದ ಅನೇಕ ರಾಜಕೀಯ ಮುತ್ಸದ್ದಿಗಳು ಕೂಡ ಚೀನಾದ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಚೀನಾದ ರಾಯಭಾರಿ ನೇಪಾಳದಲ್ಲಿ ಭಾರತದ ವಿರುದ್ಧ ಅನಾವಶ್ಯಕ ವಿವಾದ ನಿರ್ಮಿಸಿದ್ದಾರೆ’, ಎಂದು ಅವರು ಹೇಳಿದರು.
೨. ಮಾಜಿ ಪ್ರಧಾನಿ ಶೇರ ಬಹದ್ದೂರ್ ದೇವುಬಾ ಸರಕಾರದಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರರಾಗಿದ್ದ ಅರುಣ ಸುಬೇದಿ ಇವರು, ನೇಪಾಳದ ಪ್ರಧಾನ ಮಂತ್ರಿ ಪ್ರಚಂಡ ಇವರ ಸರಕಾರ ಚೀನಾಗೆ ಒಂದು ಪತ್ರ ಬರೆದು ಅವರ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ. ಪ್ರಶ್ನೆ ಏನೆಂದರೆ, ಭಾರತೀಯ ರಾಯಭಾರಿ ಏನಾದರೂ ಈ ರೀತಿಯ ಹೇಳಿಕೆ ನೀಡಿದ್ದರೆ ಆಗ ನೇಪಾಳದ ಉತ್ತರ ಏನು ? ಇರಬಹುದು ಪ್ರಚಂಡ ಇವರ ಸರಕಾರ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ಮೌನವಾಗಿದೆ.
ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ವಿರೋಧ
ನೇಪಾಳದ ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆ ಬಗ್ಗೆ ಅರಾಜಕೀಯ ಎಂದು ಘೋಷಿಸಿದೆ. ಅವರು, ಚೀನಾದ ರಾಯಭಾರಿ ನೇಪಾಳದ ಆಂತರಿಕ ವಿಷಯಗಳು ಬಗ್ಗೆ ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಹಾಗೂ ನೆರೆಯ ದೇಶದ ಬಗ್ಗೆ ನಮ್ಮ ಸಂಬಂಧಗಳ ಮೇಲೆ ಮತ್ತು ಯಾರ ಮೇಲೆ ನಾವು ಹೆಚ್ಚಾಗಿ ಅವಲಂಬಿತವಾಗಿದ್ದೇವೆ ಅವರ ಬಗ್ಗೆ ಟಿಪ್ಪಣಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲಿವುನೇಪಾಳದ ಬಳಿ ಚೀನಾ ರಾಯಭಾರಿಯ ಮೇಲೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಹೀಗೆ ನಡೆಯಲು ಸಾಧ್ಯವಿಲ್ಲ. ಭಾರತವೇ ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡಬೇಕು ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ