ನೇಪಾಳದಲ್ಲಿನ ಚೀನಾದ ರಾಯಭಾರಿಯ ಭಾರತ ವಿರೋಧಿ ಹೇಳಿಕೆ ಪ್ರಕರಣ

ನವ ದೆಹಲಿ – ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ನೇಪಾಳದ ವಿದೇಶಾಂಗ ಸಚಿವ ಎನ್.ಪಿ. ಸೌದ ಇವರು, ನಾವು ಚೀನಾದ ರಾಯಭಾರಿಗೆ ನೋಟಿಸ್ ನೀಡಿದ್ದೇವೆ, ಎಂದು ಹೇಳಿದರು.
೧. ನೇಪಾಳದ ಅನೇಕ ರಾಜಕೀಯ ಮುತ್ಸದ್ದಿಗಳು ಕೂಡ ಚೀನಾದ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಚೀನಾದ ರಾಯಭಾರಿ ನೇಪಾಳದಲ್ಲಿ ಭಾರತದ ವಿರುದ್ಧ ಅನಾವಶ್ಯಕ ವಿವಾದ ನಿರ್ಮಿಸಿದ್ದಾರೆ’, ಎಂದು ಅವರು ಹೇಳಿದರು.
೨. ಮಾಜಿ ಪ್ರಧಾನಿ ಶೇರ ಬಹದ್ದೂರ್ ದೇವುಬಾ ಸರಕಾರದಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರರಾಗಿದ್ದ ಅರುಣ ಸುಬೇದಿ ಇವರು, ನೇಪಾಳದ ಪ್ರಧಾನ ಮಂತ್ರಿ ಪ್ರಚಂಡ ಇವರ ಸರಕಾರ ಚೀನಾಗೆ ಒಂದು ಪತ್ರ ಬರೆದು ಅವರ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ. ಪ್ರಶ್ನೆ ಏನೆಂದರೆ, ಭಾರತೀಯ ರಾಯಭಾರಿ ಏನಾದರೂ ಈ ರೀತಿಯ ಹೇಳಿಕೆ ನೀಡಿದ್ದರೆ ಆಗ ನೇಪಾಳದ ಉತ್ತರ ಏನು ? ಇರಬಹುದು ಪ್ರಚಂಡ ಇವರ ಸರಕಾರ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ಮೌನವಾಗಿದೆ.
ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ವಿರೋಧ
ನೇಪಾಳದ ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆ ಬಗ್ಗೆ ಅರಾಜಕೀಯ ಎಂದು ಘೋಷಿಸಿದೆ. ಅವರು, ಚೀನಾದ ರಾಯಭಾರಿ ನೇಪಾಳದ ಆಂತರಿಕ ವಿಷಯಗಳು ಬಗ್ಗೆ ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಹಾಗೂ ನೆರೆಯ ದೇಶದ ಬಗ್ಗೆ ನಮ್ಮ ಸಂಬಂಧಗಳ ಮೇಲೆ ಮತ್ತು ಯಾರ ಮೇಲೆ ನಾವು ಹೆಚ್ಚಾಗಿ ಅವಲಂಬಿತವಾಗಿದ್ದೇವೆ ಅವರ ಬಗ್ಗೆ ಟಿಪ್ಪಣಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲಿವುನೇಪಾಳದ ಬಳಿ ಚೀನಾ ರಾಯಭಾರಿಯ ಮೇಲೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಹೀಗೆ ನಡೆಯಲು ಸಾಧ್ಯವಿಲ್ಲ. ಭಾರತವೇ ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡಬೇಕು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ