ನಾನು ಸಾಯುತ್ತೇನೆ; ಆದರೆ ಸನಾತನ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಕೊಲೆ ಬೆದರಿಕೆ ಹಾಕಿದ ಮತಾಂಧನಿಗೆ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಉತ್ತರ !

ಬಾರಾಂ (ರಾಜಸ್ಥಾನ) – ಯಾರೋ ಅನಸ್ ಅನ್ಸಾರಿ ಇದ್ದಾನೆ. ಆತ, ನಾನು ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ನನ್ನ ಸಾವು ನಿನ್ನ ಕೈಯಲ್ಲಿದ್ದರೆ, ನಾನು ಅದನ್ನು ಸಹಜವಾಗಿ ಸ್ವೀಕರಿಸುತ್ತೇನೆ; ಏಕೆಂದರೆ ಬದುಕುವುದು ಮತ್ತು ಸಾಯುವುದು ದೇವರ ಕೈಯಲ್ಲಿದೆ. ನಾವು ಸನಾತನದ ಸೇವಕರಾಗಿದ್ದೇವೆ; ಆದರೆ ಒಂದು ವಿಷಯ ಗಮನದಲ್ಲಿಡಿ ನಾನು ಸಾಯುತ್ತೇನೆ; ಆದರೆ ಸನಾತನ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ನೀವು ಎಷ್ಟು ಧೀರೇಂದ್ರ ಶಾಸ್ತ್ರಿಗಳನ್ನು ಕೊಲ್ಲುತ್ತೀರಿ ಎಂದು ನಾನು ನೋಡುತ್ತೇನೆ ಎಂದು ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಕೊಲೆ ಬೆದರಿಕೆ ಹಾಕಿದ್ದ ಮತಾಂಧ ಅನಸ್ ಅನ್ಸಾರಿಗೆ ಉತ್ತರಿಸಿದರು.