‘ಜಿ-20’ ಶೃಂಗಸಭೆಯ ಸಮಯದಲ್ಲಿ ಕಾಶ್ಮೀರದ ಜನರು ದೆಹಲಿಯ ಮೇಲೆ ದಾಳಿ ನಡೆಸಬೇಕು ! (ಅಂತೆ) – ಖಲಿಸ್ತಾನಿ ಭಯೋತ್ಪಾದಕ ಪನ್ನು

ಖಲಿಸ್ತಾನಿ ಭಯೋತ್ಪಾದಕ ಪನ್ನು ಇವನ ಪ್ರಚೋದನೆ

ಗುರುಪತವಂತ ಸಿಂಹ ಪನ್ನು

ನವ ದೆಹಲಿ – ದೆಹಲಿಯಲ್ಲಿ ಜಿ-20 ಶೃಂಗಸಭೆ ವಿಫಲಗೊಳಿಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಇಂದ ‘ಐ.ಎಸ್.ಐ’ ಈ ಪಾಕಿಸ್ತಾನದ ಗೂಢಚಾರ ಸಂಸ್ಥೆಯ ನಿರ್ದೇಶನದಂತೆ ಸಂಚು ರೂಪಿಸಿದ್ದಾರೆ. ‘ಸಿಖ್ ಫಾರ್ ಜಸ್ಟಿಸ್’ನ ಮುಖ್ಯಸ್ಥ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನು ಕಾಶ್ಮೀರದ ಜನರನ್ನು ಪ್ರಚೋದಿಸುತ್ತಿದ್ದಾನೆ. ಪನ್ನು ಇವನು ‘ಐ.ಎಸ್’ಐ’ ನ ‘ಕೆ-2 ಫಾರ್ಮುಲಾ’ದ (ಕೆ-2 ಎಂದರೆ ಕಾಶ್ಮೀರ್-ಖಲಿಸ್ತಾನ) ಇದರ ಕುರಿತು ಒಂದು ಆಡಿಯೋ ಪ್ರಸಾರ ಮಾಡಿದ್ದಾನೆ. ಅದರಲ್ಲಿ ಅವನು ಕಾಶ್ಮೀರ ಜನರಿಗೆ ಕಾಶ್ಮೀರ ಬಿಟ್ಟು ದೆಹಲಿಯ ಮೇಲೆ ದಾಳಿ ನಡೆಸಲು ಕರೆ ನೀಡಿದ್ದಾನೆ. ಇದರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಜಿ-20 ಶೃಂಗಸಭೆಯ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ದಾಳಿಯಾಗುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಯಿಂದ ಅತಿದಕ್ಷತೆಯ ಆದೇಶ ನೀಡಿದ್ದಾರೆ.

ಈ ಆಡಿಯೋದಲ್ಲಿ ಖಲಿಸ್ತಾನಿ ಭಯೋತ್ಪಾದಕ ಪನ್ನು ಇವನು ಮುಸಲ್ಮಾನರಿಗೆ ಶುಕ್ರವಾರದ ನಮಾಜಿನ ನಂತರ ದೆಹಲಿಯಲ್ಲಿನ ಪ್ರಗತಿ ಮೈದಾನ ಕಡೆಗೆ ಮುನ್ನಡೆಯಲು ಹೇಳಿದ್ದಾನೆ. ಹಾಗೂ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವ ಬೆದರಿಕೆ ನೀಡಿದ್ದಾನೆ. ಸೆಪ್ಟೆಂಬರ್ ೯ ರಿಂದ ೧೨ ಈ ಸಮಯದಲ್ಲಿ ದೆಹಲಿಯಲ್ಲಿ ಜಿ-20 ಶೃಂಗ ಸಭೆ ನಡೆಯುವುದು. ಈ ಶೃಂಗ ಸಭೆಯಲ್ಲಿ ಜಗತ್ತಿನ ಪ್ರಮುಖ ನಾಯಕರು ಉಪಸ್ಥಿತರಿರುವರು.

ಸಂಪಾದಕರ ನಿಲುವು

* ಖಲಿಸ್ತಾನಿಗಳಿಗೆ ಸರಿಯಾದ ಪಾಠ ಕಲಿಸದೇ ಇದ್ದರಿಂದ ಅವರ ಉದ್ಧಟತನ ಮಿತಿಮೀರಿ ಈ ರೀತಿಯ ಪ್ರಚೋದನೆ ನೀಡುತ್ತಿದ್ದಾರೆ. ಅವರಿಗೆ ಶಾಶ್ವತವಾದ ಪಾಠ ಕಲಿಸುವಂತಹ ಕಾರ್ಯ ಸರಕಾರ ಮಾಡುವುದು ಅಪೇಕ್ಷಿತವಾಗಿದೆ !