ಸರಕಾರಿ ಅಧಿಕಾರಿಗಳನ್ನು ಅನಗತ್ಯವಾಗಿ ಟೀಕಿಸಬೇಡಿ !- ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯಗಳಿಗೆ ಸಲಹೆ!

ನವ ದೆಹಲಿ – ಸರಕಾರಿ ಅಧಿಕಾರಿಗಳನ್ನು ಅನಗತ್ಯವಾಗಿ ಅಥವಾ ತಪ್ಪಾಗಿ ಟೀಕಿಸಬೇಡಿ. ಅಗತ್ಯವಿದ್ದರೆ ಮಾತ್ರ ಟೀಕಿಸುವಂತೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡಿದೆ. ಒಂದು ಮೊಕದ್ದಮೆಯ ಪ್ರಕರಣದಲ್ಲಿ, ಪಂಜಾಬ್-ಹರಿಯಾಣ ಉಚ್ಚ ನ್ಯಾಯಾಲಯವು, ಸರಕಾರಿ ಅಧಿಕಾರಿಯಾಗಿದ್ದ ಆರೋಪಿಗೆ ‘ಶಿಕ್ಷೆಯಾಗಬೇಕು; ಏಕೆಂದರೆ ದಾಖಲೆಯೊಂದರ ಬಗ್ಗೆ ಸುಳ್ಳು ಉತ್ತರ ನೀಡಿದ್ದಾರೆ’ ಎಂದು ಹೇಳಿತ್ತು.