ಮಣಿಪುರ ಹಿಂಸಾಚಾರದ ಮೊಕದ್ದಮೆ ಗೌಹಾತಿ (ಅಸ್ಸಾಂ)ಯಲ್ಲಿ ನಡೆಯಲಿದೆ


ನವ ದೆಹಲಿ – ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿ.ಬಿ,ಐ) ದಾಖಲಿಸಿರುವ ಪ್ರಕರಣವನ್ನು ಅಸ್ಸಾಂನ ರಾಜಧಾನಿ ಗೌಹಾತಿಗೆ ವರ್ಗಾಯಿಸಲು ಸುಪ್ರೀ ಕೋರ್ಟ್ ಆದೇಶಿಸಿದೆ. ಇದಕ್ಕಾಗಿ ಗೌಹಾತಿ ಉಚ್ಚ ನ್ಯಾಯಾಲಯಕ್ಕೆ ಒಂದು ಹೆಚ್ಚುವರಿ ವಿಶೇಷ ನ್ಯಾಯಧೀಶರನ್ನು ನೇಮಿಸಲು ಮತ್ತು ಮೊಕದ್ದಮೆಯ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನ್ಯಾಯಾಲಯವು ಆದೇಶಿಸಿದೆ.