ಮಣಿಪುರದಲ್ಲಿ ಮತ್ತೆ ಹಿಂಸಾಚಾರ : 3 ಕುಕಿ ಭಯೋತ್ಪಾದಕರ ಹತ್ಯೆ !

ಇಂಫಾಲ (ಮಣಿಪುರ) – ಆಗಸ್ಟ್ 18 ರಂದು ಬೆಳಿಗ್ಗೆ 5.30 ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ ಎಂದು ತಿಳಿದಿದೆ. ಈ ವೇಳೆ ಉಖ್ರುಲ್ ಜಿಲ್ಲೆಯ ಥವಯಿ ಗ್ರಾಮದಲ್ಲಿ ಮೈತೇಯಿ ಮತ್ತು ಕುಕಿ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂವರು ಕುಕಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಗಡಿ ಭದ್ರತಾ ಪಡೆಯ ಯೋಧರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

(ಸೌಜನ್ಯ : The Indian Express)