ಸಿಬಿಐನ 53 ಅಧಿಕಾರಿಗಳ ತನಿಖಾ ತಂಡದಲ್ಲಿ 29 ಮಹಿಳಾ ಅಧಿಕಾರಿಗಳು !

ಇಂಫಾಳ (ಮಣೀಪುರ) – ಮಣೀಪುರದಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರದ ವಿಚಾರಣೆಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ 53 ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಲ್ಲಿ 29 ಮಹಿಳೆಯರೂ ಸೇರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳನ್ನು ವಿಚಾರಣೆಗಾಗಿ ಸೇರಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇವರೆಲ್ಲರನ್ನು ದೇಶದಲ್ಲಿನ ಸಿಬಿಐನ ಬೇರೆ ಬೇರೆ ಕಚೇರಿಗಳಿಂದ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಈ ವಿಚಾರಣೆಯಲ್ಲಿ ಮಣೀಪುರದಲ್ಲಿನ ಯಾವುದೇ ಅಧಿಕಾರಿಯನ್ನು ಸೇರಿಸಿಕೊಂಡಿಲ್ಲ. ಸಿಬಿಐ ಮೇಲೆ ಪಕ್ಷಪಾತದ ಆರೋಪ ಬರಬಾರದು; ಎಂದು ಈ ಎಚ್ಚರಿಕೆ ವಹಿಸಲಾಗಿದೆ. ಮಣೀಪುರ ಹಿಂಸಾಚಾರಲ್ಲಿನ 17 ಪ್ರಕರಣಗಳು ಸಿಬಿಐ ವಿಚಾರಣೆ ಮಾಡಲಿದೆ. ಇವುಗಳ ಪೈಕಿ 8 ಪ್ರಕರಣಗಳಲ್ಲಿ ದೂರು ದಾಖಲಿಸಲ್ಪಟ್ಟಿವೆ. ಮಣೀಪುರ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
मणिपुर: हिंसा की जांच करेंगे CBI के 53 अफसर, इन्हें देशभर के अलग-अलग ऑफिस से बुलाया गया#Manipur #CBI https://t.co/IcjCGrTuSo pic.twitter.com/Iclmrxo5Xq
— Dainik Bhaskar (@DainikBhaskar) August 17, 2023
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!