
ನೂಹ (ಹರಿಯಾಣ) – ಇಲ್ಲಿಯ ಗಲಭೆಯ ಆರೋಪ ಇರುವ ಕಾಂಗ್ರೆಸ್ಸಿನ ಶಾಸಕ ಮಮ್ಮನ ಖಾನ ಇವರ ಮತದಾರ ಕ್ಷೇತ್ರವಾಗಿರುವ ಫಿರೋಜಪುರ ಝೀರಕ ಇಲ್ಲಿ ಆಗಸ್ಟ್ ೧೨ ರಂದು ಪೊಲೀಸ ಮತ್ತು ಗೋಕಳ್ಳಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು. ಈ ಚಕಮಕಿಯಲ್ಲಿ ತೌಫೀಕ್ ಎಂಬ ಗೋಕಳ್ಳಸಾಗಣಿಕೆದಾರನಿಗೆ ಗುಂಡು ತಾಗಿರುವುದರಿಂದ ಗಂಭೀರವಾಗಿ ಗಾಯಗೊಂಡನು ಹಾಗೂ ಇತರ ಗೋಕಳ್ಳ ಸಾಗಾಣಿಕೆದಾರರು ಘಟನಾ ಸ್ಥಳದಿಂದ ಪಲಾಯನ ಮಾಡಿದರು. ಪೊಲೀಸರು ೨೧ ಗೋವುಗಳನ್ನು ಬಿಡುಗಡೆ ಮಾಡಿದರು. ಗೋರಕ್ಷಕ ದಳದ ಸದಸ್ಯರು ಪೊಲೀಸರಿಗೆ ಗೋಕಳ್ಳಸಾಗಾಣಿಕೆಯ ಬಗ್ಗೆ ಮಾಹಿತಿ ನೀಡಿದ್ದರು. (ಯಾವಾಗಲೂ ಗೋಪ್ರೇಮಿಗಳೇ ಇದರ ಮಾಹಿತಿ ಪೊಲೀಸರಿಗೆ ನೀಡುತ್ತಾರೆ. ಇಂತಹ ಮಾಹಿತಿ ಪೊಲೀಸರಿಗೆ ಏಕೆ ದೊರೆಯುವುದಿಲ್ಲ ? – ಸಂಪಾದಕರು) ಗೋರಕ್ಷಕ ದಳದ ಸದಸ್ಯರು ಗೋಕಳ್ಳಸಾಗಾಣಿಕೆದಾರರ ವಾಹನವನ್ನು ಬೆಂಬೆತ್ತಿದರು. ದೆಹಲಿ ವಡೋದರ ಎಕ್ಸ್ಪ್ರೆಸ್ ಮಾರ್ಗದಲ್ಲಿ ವಾಹನ ಗ್ರಾಮದ ಬಳಿ ಬರುತ್ತಲೇ ಪೊಲೀಸರು ಗೋಕಳ್ಳಸಾಗಾಣಿಕೆದಾರರಿಗೆ ನಿಲ್ಲಿಸುವ ಸನ್ನೆ ಮಾಡಿದರು; ಆದರೆ ಅವರು ವಾಹನ ನಿಲ್ಲಿಸದೆ, ಪೊಲೀಸರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ಪ್ರತ್ಯುತ್ತರ ನೀಡುಲು ಗುಂಡು ಹಾರಿಸಿ ಕಳ್ಳಸಾಗಾಣಿಕೆದಾರರನ್ನು ತಡೆಯುವ ಪ್ರಯತ್ನ ಮಾಡಿದರು. ಗೋಕಳ್ಳಸಾಗಾಣಿಕೆದಾರರು ತಮ್ಮನ್ನು ಮುತ್ತಿಗೆ ಹಾಕಿರುವುದನ್ನು ನೋಡಿ ಇಳಿದು ಪಲಾಯನ ಮಾಡಿದರು.
Haryana: Amidst the ongoing communal tension in Nuh, the police on Saturday nabbed a gang of cow smugglers following a brief encounter near Mahu village at Ferozepur Jhirka in Nuh district.
21 cows saved. Taufiq shot at leg in encounter, arrested. Raids going on to nab other gang… pic.twitter.com/jXvgk0Vf3i— Megh Updates 🚨™ (@MeghUpdates) August 12, 2023
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !