ಶಿಮ್ಲಾ (ಹಿಮಾಚಲಪ್ರದೇಶ)ದಲ್ಲಿ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ !

ಭಾರತದಲ್ಲಿ ಹಿಂದುಗಳ ಸಂತ ಮಹಾಂತರು, ಪೂಜಾರಿ ಇವರು ಅಸುರಕ್ಷಿತವಾಗಿದ್ದಾರೆ, ಇದು ಖೇದಕರವಾಗಿದೆ !

ಶಿಮ್ಲಾ (ಹಿಮಾಚಲಪ್ರದೇಶ) – ಇಲ್ಲಿಯ ದುಷ್ಕರ್ಮಿಗಳು ಶ್ರೀ ಭೂತೇಶ್ವರ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಶವವನ್ನು ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆಯಲಾಯಿತು. ಪೂಜಾರಿ ಮಾರ್ಚ್ ೨೦೨೧ ರಿಂದ ದೇವಸ್ಥಾನದಲ್ಲಿ ಕಟ್ಟಿರುವ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು. ಪೂಜಾರಿಯ ಹೆಸರು ಸುನಿಲ ದಾಸ ಎಂದಾಗಿದ್ದು ಅವರು ಮಹಾರಾಷ್ಟ್ರದ ನಿವಾಸಿಯಾಗಿದ್ದರು. ಈ ಘಟನೆಯಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಶಿಮ್ಲಾ ಪೊಲೀಸರು ಹತ್ಯೆಯ ದೂರು ದಾಖಲಿಸಿಕೊಂಡು ಆರೋಪಿಯ ಶೋಧ ನಡೆಸುತ್ತಿದ್ದಾರೆ. ಪೂಜಾರಿ ದಾಸ್ ಇವರು ಆಗಸ್ಟ್ ೮ ರಂದು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ಆಗಸ್ಟ್ ೧೨ ರಂದು ಅವರ ಶವ ದೇವಸ್ಥಾನದಿಂದ ೧೫ ಮೀಟರ್ ಅಂತರದ ಪೊದೆಯಲ್ಲಿ ಸಿಕ್ಕಿದೆ. ಮೃತ ಪೂಜಾರಿಯ ಶರೀರದ ಮೇಲೆ ಗಾಯಗಳ ಇತ್ತು. ಶವಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು. ‘ಈ ಪ್ರಕರಣದ ತನಿಖೆ ಮುಂದುವರೆದಿದೆ ಮತ್ತು ಆದಷ್ಟು ಬೇಗನೆ ಕೊಲೆಗಾರರನ್ನು ಬಂಧಿಸಲಾಗುವುದೆಂದು’ ಪೊಲೀಸರು ಹೇಳಿದ್ದಾರೆ.