ಕಾಶ್ಮೀರದಲ್ಲಿ 2 ಭಯೋತ್ಪಾದಕರ ಹತ್ಯೆ

3 ದಿನಗಳಲ್ಲಿ 3 ನೇ ಚಕಮಕಿ

ಶ್ರೀನಗರ – ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬರಿಯಾಮಾದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ 3 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಮೂರನೇ ಚಕಮಕಿ ಇದಾಗಿದೆ.

ಆಗಸ್ಟ್ 5 ರಂದು ರಾಜೌರಿಯ ಖವಾಸ್ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ 1 ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಕುಲ್ಗಾಮ್‌ನಲ್ಲಿ ಆಗಸ್ಟ್ 4 ರಂದು ಸಾಯಂಕಾಲ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ 3 ಯೋಧರು ಹುತಾತ್ಮರಾಗಿದ್ದರು. ಅಧಿಕಾರಿಗಳು ನೀಡಿರುವ ಮಾಹಿತಿಯನುಸಾರ, ಕುಲ್ಗಾಮ್‌ನ ಹಲಾನ್ ಅರಣ್ಯದಲ್ಲಿ ಭಯೋತ್ಪಾದಕರು ಸೇನಾ ಟೆಂಟ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಪಾಕಿಸ್ತಾನವನ್ನು ನಾಶಪಡಿಸುವುದು ಆವಶ್ಯಕ !