
ನೂಹ (ಹರಿಯಾಣ) – ಇಲ್ಲಿಯ ಪೊಲೀಸ ಅಧಿಕಾರಿ ವರುಣ ಸಿಂಗಾಲ ಇವರ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನದಲ್ಲಿ ನರೇಂದ್ರ ಬಿಜಾರನೀಯ ಇವರನ್ನು ನೇಮಕ ಮಾಡಿದ್ದಾರೆ. ನೂಹದಲ್ಲಿ ಜುಲೈ ೩೧ ರಂದು ನಡೆದಿರುವ ಹಿಂಸಾಚಾರದ ಸಮಯದಲ್ಲಿ ವರುಣ ಸಿಂಗಾಲ ಇವರು ರಜೆಯಲ್ಲಿದ್ದರು.
#BreakingNews: Aftermath of #Haryana‘s Nuh violence!
SP Varun Singla transferred, people asked to offer namaz from homeCNN-News18’s @nikhil_lakhwani shares more details from #Nuh #NuhViolence | @Sriya_Kundu pic.twitter.com/Io0MPSPjQK
— News18 (@CNNnews18) August 4, 2023
೧. ನೂಹದಲ್ಲಿಯ ಹಿಂಸಾಚಾರದ ನಂತರ ಪಕ್ಕದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹಿಂಸಾಚಾರದ ಘಟನೆ ನಡೆಯುತ್ತಲಿವೆ. ಪಾನಿಪತದಲ್ಲಿ ಧಮಿಜ ಕಾಲೋನಿಯಲ್ಲಿ ಆಗಸ್ಟ್ ೩ ರ ರಾತ್ರಿ ದುಷ್ಕರ್ಮಿಗಳು ಮುಸಲ್ಮಾನರ ಅಂಗಡಿಗಳು ಮತ್ತು ೨ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
೨. ಆಗಸ್ಟ್ ೪ ರಂದು ಇಲ್ಲಿಯ ಮುಸಲ್ಮಾನರು ಮನೆಯಲ್ಲಿಯೇ ನಮಾಜ ಮಾಡಿದ್ದಾರೆ. ಪೊಲೀಸರು ಅವರಿಗೆ ಮಸೀದಿಗೆ ಹೋಗದಂತೆ ಕರೆ ನೀಡಿದ್ದರು. ಎಲ್ಲಾ ಮಸೀದಿಯ ಹೊರಗೆ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
೩. ನೂಹದಲ್ಲಿನ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ೭ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಗೃಹರಕ್ಷಕ ದಳದ ಗುರುಸೇವಕ ಮತ್ತು ನೀರಜ ಎಂಬ ಸೈನಿಕ ಹಾಗೂ ಶಕ್ತಿ ಸಿಂಹ, ಅಭಿಷೇಕ, ಪ್ರದೀಪ ಶರ್ಮಾ ಮತ್ತು ಇತರ ೨ ವ್ಯಕ್ತಿಗಳ ಸಮಾವೇಶವಿದೆ. ಪೊಲೀಸರು ಒಟ್ಟು ೯೩ ದೂರುಗಳನ್ನು ದಾಖಲಿಸಿದ್ದು ೧೮೬ ಜನರನ್ನು ಬಂಧಿಸಿದ್ದಾರೆ. ಹಾಗೂ ೭೮ ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !

ನೂಹದ ತಾವಡು ಪ್ರದೇಶದಲ್ಲಿ ಪೊಲೀಸರು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ ಕೈಗೊಳ್ಳುತ್ತಾ ಅವುಗಳನ್ನು ನೆಲೆಸಮ ಮಾಡಿದರು. ನೂಹದಲ್ಲಿನ ಹಿಂಸಾಚಾರದಲ್ಲಿ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ಮುಸಲ್ಮಾನರ ಕೈವಾಡವಿತ್ತು ಎಂದು ಪೊಲೀಸರಿಗೆ ಕಂಡುಬಂದ ನಂತರ ಈ ಕ್ರಮ ಕೈಗೊಂಡರು. (ನೂಹದಲ್ಲಿ ಹಿಂಸಾಚಾರ ನಡೆಯದೇ ಇದ್ದಿದ್ದರೆ ಆಗ ಸರಕಾರದಿಂದ ಈ ಗುಡಿಸಲುಗಳ ಮೇಲೆ ಕ್ರಮ ಕೈಗೊಳ್ಳತ್ತಿರಲಿಲ್ಲ ! ಹೀಗೆ ಇದರಿಂದ ತಿಳಿದು ಬರುತ್ತದೆ ! ಈ ಗುಡಿಸಿಲುಗಳು ಕಟ್ಟುವವರೆಗೆ ಪೊಲೀಸರು ಮತ್ತು ಸರಕಾರ ನಿದ್ರಿಸಿತ್ತೆ ? ದೇಶದಲ್ಲಿ ಈ ರೀತಿ ಎಷ್ಟು ಸ್ಥಳಗಳಲ್ಲಿ ಈ ನುಸುಳುಕೋರರು ವಾಸಿಸುತ್ತಿದ್ದಾರೆ, ಇದನ್ನು ಕಂಡು ಹಿಡಿದು ಅವರ ಮೇಲೆ ಕ್ರಮ ಕೈಗೊಳ್ಳುವರೆ ? – ಸಂಪಾದಕರು) ಸುಮಾರು ೨೦೦ ಕೂಹೆಚ್ಚಿನ ಗುಡಿಸಿಲುಗಳನ್ನು ನೆಲೆಸನ ಮಾಡಿದ್ದಾರೆ. ಸುಮಾರು ೪ ಗಂಟೆ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಗುಡಿಸಿಲಗಳು ಸರಕಾರಿ ಜಾಗದಲ್ಲಿ ಕಟ್ಟಿದ್ದರು.
खट्टर सरकार ने अपनाया योगी मॉडल
नूंह में रोहिंग्याओं की अवैध बस्ती पर चलाया बुलडोजर pic.twitter.com/pGTY4k01jV
— Sudarshan News (@SudarshanNewsTV) August 4, 2023
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ