ಬರೇಲಿಯ (ಉತ್ತರಪ್ರದೇಶ) ವನಖಂಡಿ ನಾಥ ದೇವಸ್ಥಾನದ ಹತ್ತಿರ ಮತಾಂಧರಿಂದ ಕಾವಡ ಯಾತ್ರಿಕರ ಮೇಲೆ ಕಲ್ಲು ತೂರಾಟ !

ಬರೇಲಿ (ಉತ್ತರಪ್ರದೇಶ) – ವನಖಂಡಿ ನಾಥ ದೇವಸ್ಥಾನದ ಹತ್ತಿರದಲ್ಲಿ 50 ರಿಂದ 60 ಮತಾಂಧರು ಕಾವಡ ಯಾತ್ರಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ವಿಡಿಯೋ ಪ್ರಸಾರವಾಗಿದೆ. ಈ ಘಟನೆಯ ಬಳಿಕ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತ ಮಾಡಲಾಗಿದೆ. ಕಲ್ಲು ತೂರಾಟದ ಬಗ್ಗೆ ಕಾವಡ ಯಾತ್ರಿಕರಲ್ಲಿ ಆಕ್ರೋಶವಿದೆ.

(ಸೌಜನ್ಯ – Hindustan Times)

ವನಖಂಡಿ ನಾಥ ದೇವಸ್ಥಾನ ಪ್ರಮುಖ ನಾಥ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರದಂದು ಕಾವಡ ಯಾತ್ರಿಕರು ಹರಿದ್ವಾರದಿಂದ ಕಾವಡದಲ್ಲಿ ಗಂಗಾಜಲವನ್ನು ತೆಗೆದುಕೊಂಡು ಅಭಿಷೇಕ ಮಾಡುತ್ತಾರೆ. ಇದಕ್ಕಾಗಿ ಕಾವಡ ಯಾತ್ರಿಕರು ಇಲ್ಲಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ.

ಸಂಪದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಹಜ ಸರಕಾರ ಇರುವಾಗ ಮತಾಂಧರು ಈ ರೀತಿ ದಾಳಿ ಮಾಡುವ ಧೈರ್ಯ ಮಾಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !