
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಯಾಗಲು ವಿನೂತನವಾದ ‘ಅಷ್ಟಾಂಗಸಾಧನೆ’ಯನ್ನು ಕಂಡು ಹಿಡಿದಿದ್ದಾರೆ. ಅದನ್ನು ಅಳವಡಿಸಿಕೊಂಡ ಸನಾತನ ಸಂಸ್ಥೆಯ ಸಾವಿರಾರು ಸಾಧಕರಿಗೆ ಲಾಭವಾಗಿದೆ. ಈ ಅಷ್ಟಾಂಗಸಾಧನೆಯಲ್ಲಿ ‘ಸ್ವಭಾವದೋಷ-ನಿರ್ಮೂಲನೆ (ಹಾಗೂ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ’ ಈ ೮ ಅಂಗಗಳು, ಎಂದರೆ ಹಂತಗಳಾಗಿವೆ. ಈ ಪ್ರಕ್ರಿಯೆಯ ಬಗ್ಗೆ ನನಗೆ ಮುಂದಿನ ಅಂಶಗಳ ಅರಿವಾಯಿತು.
೧. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ, ಭಾವಜಾಗೃತಿ ಮತ್ತು ಸತ್ಸಂಗ’ ಈ ಮೊದಲ ೫ ಅಂಗ ಗಳನ್ನು ಮನಸ್ಸಿನ ಮೂಲಕ ಮಾಡಬಹುದಾಗಿದೆ ಮತ್ತು ಇನ್ನುಳಿದ ‘ಸತ್ಸೇವೆ, ತ್ಯಾಗ ಮತ್ತು ಪ್ರೀತಿ ಈ ಅಂಗಗಳನ್ನು ಕೃತಿಯ ಮೂಲಕ ಮಾಡಬಹುದಾಗಿದೆ. ಆದುದರಿಂದ ನಾವು ಕಾರಣಾಂತರಗಳಿಂದ ಅಸ್ವಸ್ಥವಿರುವಾಗ ನಾವು ಮೊದಲ ೫ ಅಂಗಗಳ ಮೂಲಕ ಸಹಜವಾಗಿ ಸಾಧನೆಯನ್ನು ಮಾಡಬಹುದು.
೨. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ ಮತ್ತು ಭಾವಜಾಗೃತಿ’ ಈ ಮೊದಲ ೪ ಅಂಗಗಳು ಮನೋಲಯ ಮಾಡುತ್ತವೆ. ನಂತರದ ‘ಸತ್ಸಂಗ, ಸತ್ಸೇವೆ ಮತ್ತು ತ್ಯಾಗ’ ಈ ೩ ಅಂಗಗಳು ಬುದ್ಧಿಯ ಲಯ ಮಾಡುತ್ತವೆ ಮತ್ತು ಕೊನೆಯ ‘ಪ್ರೀತಿ’ ಈ ಅಂಗವು ಅಹಂನ ಲಯ ಮಾಡುತ್ತದೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೬.೨೦೨೩)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !