
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಯಾಗಲು ವಿನೂತನವಾದ ‘ಅಷ್ಟಾಂಗಸಾಧನೆ’ಯನ್ನು ಕಂಡು ಹಿಡಿದಿದ್ದಾರೆ. ಅದನ್ನು ಅಳವಡಿಸಿಕೊಂಡ ಸನಾತನ ಸಂಸ್ಥೆಯ ಸಾವಿರಾರು ಸಾಧಕರಿಗೆ ಲಾಭವಾಗಿದೆ. ಈ ಅಷ್ಟಾಂಗಸಾಧನೆಯಲ್ಲಿ ‘ಸ್ವಭಾವದೋಷ-ನಿರ್ಮೂಲನೆ (ಹಾಗೂ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ’ ಈ ೮ ಅಂಗಗಳು, ಎಂದರೆ ಹಂತಗಳಾಗಿವೆ. ಈ ಪ್ರಕ್ರಿಯೆಯ ಬಗ್ಗೆ ನನಗೆ ಮುಂದಿನ ಅಂಶಗಳ ಅರಿವಾಯಿತು.
೧. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ, ಭಾವಜಾಗೃತಿ ಮತ್ತು ಸತ್ಸಂಗ’ ಈ ಮೊದಲ ೫ ಅಂಗ ಗಳನ್ನು ಮನಸ್ಸಿನ ಮೂಲಕ ಮಾಡಬಹುದಾಗಿದೆ ಮತ್ತು ಇನ್ನುಳಿದ ‘ಸತ್ಸೇವೆ, ತ್ಯಾಗ ಮತ್ತು ಪ್ರೀತಿ ಈ ಅಂಗಗಳನ್ನು ಕೃತಿಯ ಮೂಲಕ ಮಾಡಬಹುದಾಗಿದೆ. ಆದುದರಿಂದ ನಾವು ಕಾರಣಾಂತರಗಳಿಂದ ಅಸ್ವಸ್ಥವಿರುವಾಗ ನಾವು ಮೊದಲ ೫ ಅಂಗಗಳ ಮೂಲಕ ಸಹಜವಾಗಿ ಸಾಧನೆಯನ್ನು ಮಾಡಬಹುದು.
೨. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ ಮತ್ತು ಭಾವಜಾಗೃತಿ’ ಈ ಮೊದಲ ೪ ಅಂಗಗಳು ಮನೋಲಯ ಮಾಡುತ್ತವೆ. ನಂತರದ ‘ಸತ್ಸಂಗ, ಸತ್ಸೇವೆ ಮತ್ತು ತ್ಯಾಗ’ ಈ ೩ ಅಂಗಗಳು ಬುದ್ಧಿಯ ಲಯ ಮಾಡುತ್ತವೆ ಮತ್ತು ಕೊನೆಯ ‘ಪ್ರೀತಿ’ ಈ ಅಂಗವು ಅಹಂನ ಲಯ ಮಾಡುತ್ತದೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೬.೨೦೨೩)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !