|

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯ ಸರಕಾರದಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದೊಡ್ಡ ಹಗರಣದ ವಾರ್ತೆ ಬಹಿರಂಗವಾಗಿದೆ. ಬುಲಂದಶಹರದಲ್ಲಿನ ಕಾರ್ಮಿಕ ಇಲಾಖೆಯ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹಕ್ಕೆ ಅನುದಾನ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ವಿವಾಹಕ್ಕಾಗಿ ಅನುದಾನ ಸ್ವರೂಪದಲ್ಲಿ ೭೫ ಸಾವಿರ ರೂಪಾಯಿ ನೀಡಲಾಯಿತು. ಒಟ್ಟು ೫೫೫ ದಂಪತಿಗಳ ವಿವಾಹ ನಡೆಯಿತು. ಅದರಲ್ಲಿ ಕನಿಷ್ಠ ೨೦೦ ಜನರು ಸಂಪೂರ್ಣವಾಗಿ ಅಯೋಗ್ಯರಾಗಿದ್ದರು.
೧. ಅನೇಕ ಪ್ರಕರಣದಲ್ಲಿ, ವಿವಾಹಕ್ಕಾಗಿ ನೋಂದಣಿ ಮಾಡಿರುವ ವರನ ಮಾಹಿತಿ ಸುಳ್ಳಾಗಿದ್ದು ಅದರಲ್ಲಿ ಗ್ರಾಮದಲ್ಲಿ ಆ ಹೆಸರಿನ ಯಾವ ವ್ಯಕ್ತಿಯೂ ವಾಸಿಸುತ್ತಿಲ್ಲ, ಆದರೂ ಕೂಡ ಅದನ್ನು ಖಚಿತಪಡಿಸಿಕೊಳ್ಳದೆ ನೋಂದಣಿ ಮಾಡುವವರ ಬ್ಯಾಂಕ್ ಖಾತೆಗೆ ೭೫ ಸಾವಿರ ರೂಪಾಯಿ ಜಮಾ ಮಾಡಲಾಗಿದೆ. ಹಾಗೂ ಕೆಲವು ಪ್ರಕರಣದಲ್ಲಿ ಜನರು ಸ್ವಂತ ಸಂಬಂಧಿಕರ ವಿವಾಹ ಮಾಡಿಕೊಳ್ಳುವ ನೋಂದಣಿ ಮಾಡಿಸಿ ಸರಕಾರಿ ಅನುದಾನ ಲೂಟಿ ಮಾಡಿದ್ದಾರೆ.
೨. ಈ ರೀತಿಯ ನಕಲಿ ವರ ಸಿದ್ಧಪಡಿಸಿಕೊಂಡು ಸುಮಾರು ೧೨ ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ ಒಟ್ಟು ೧೬ ದಂಪತಿಗಳು ಅಯೋಗ್ಯವೆಂದು ಖಚಿತಪಡಿಸಲಾಗಿದೆ. ಕೆಲವು ಪ್ರಕರಣದಲ್ಲಿ ಕೆಲವು ವರ ವಿವಾಹಿತ ಇರುವುದು ಕೂಡ ಬಹಿರಂಗವಾಗಿದೆ.
ಸಂಪಾದಕರ ನಿಲುವುಸರಕಾರಿ ಅನುದಾನ ನೀಡುವಾಗ ಸಂಬಂಧಿತ ಫಲಾನುಭವಿಗಳ ಯೋಗ್ಯತೆ ಪರಿಶೀಲಿಸಿ ನೀಡಬೇಕು. ಇಂತಹ ಸಾಮಾನ್ಯ ನಿಯಮ ಕೂಡ ಪಾಲಿಸದಿರುವ ಸಂಬಂಧಿತ ಭ್ರಷ್ಟ ಸರಕಾರಿ ಅಧಿಕಾರಿಗಳ ವಿಚಾರಣೆ ನಡೆಸಿ ಅವರಿಂದ ಈ ಹಣ ವಸೂಲಿ ಮಾಡಬೇಕು ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ