ಝಾರಖಂಡ ಉಚ್ಚ ನ್ಯಾಯಾಲಯದಿಂದ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಕೇಸ್ ಗೆ ತಾತ್ಕಾಲಿಕ ತಡೆ !

ಪ್ರಧಾನಿ ಮೋದಿ ಇವರ ಅವಮಾನ ಮಾಡಿದ ಪ್ರಕರಣ

ಝಾರಖಂಡ ಉಚ್ಚ ನ್ಯಾಯಾಲಯ

ರಾಂಚಿ (ಝಾರಖಂಡ) – ಝಾರಖಂಡ ಉಚ್ಚನ್ಯಾಯಲಯವು ಜುಲೈ ೪ ರಂದು ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದೆ. ಆಗಸ್ಟ್ ೧೬ ರಂದು ಮುಂದಿನ ವಿಚಾರಣೆ ನಡೆಯಲಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಎಲ್ಲ ಕಳ್ಳರ ಅಡ್ಡ ಹೆಸರು ಮೋದಿ ಎಂದೇಕೆ ಇರುತ್ತದೆ ? ಎಂದು ಹೇಳಿದ್ದರು. ಗಾಂಧಿಯವರು ಪ್ರಧಾನಮಂತ್ರಿಯವರನ್ನು ಅವಮಾನಿಸುವ ಈ ಹೇಳಿಕೆಯ ವಿರುದ್ಧ ದೇಶಾದ್ಯಂತ ದೂರನ್ನು ದಾಖಲಿಸಲಾಯಿತು. ಸೂರತ್ ನ ನ್ಯಾಯಲಯವು ಈ ಮೊದಲು ಈ ಪ್ರಕರಣದಲ್ಲಿ ಗಾಂಧಿಯವರಿಗೆ ೨ ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಿಂದ ಅವರು ಸಂಸತ್ತಿನ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ.