ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗೃಹಸಚಿವಾಲಯದ ನಡುವೆ ಚರ್ಚೆ

ನವದೆಹಲಿ – ರಾಷ್ಟ್ರೀಯ ತನಿಖಾ ದಳವು ಕೇಂದ್ರೀಯ ಗೃಹ ಸಚಿವಾಲಯಕ್ಕೆ ಉತ್ತರ ಭಾರತದ ಜೈಲಿನಲ್ಲಿರುವ 10 ರಿಂದ 12 ಕುಖ್ಯಾತ ಗೂಂಡಾಗಳನ್ನು ಅಂಡಮಾನ-ನಿಕೋಬಾರನ `ಕಾಲಾಪಾನಿ’ ಜೈಲಿಗೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಮಂಡಿಸಿದೆ. ಈ ಸಂದರ್ಭದಲ್ಲಿ ತನಿಖಾ ದಳ ಮತ್ತು ಸಚಿವಾಲಯದ ಅಧಿಕಾರಿಗಳ ಮಧ್ಯೆ ಇತ್ತೀಚೆಗೆ ಒಂದು ಸಭೆ ನಡೆದಿದೆ.
1. ರಾಷ್ಟ್ರೀಯ ತನಿಖಾ ದಳಕ್ಕೆ ದೆಹಲಿ, ಪಂಜಾಬ ಮತ್ತು ಹರಿಯಾಣಾ ಜೈಲಿನಲ್ಲಿರುವ ಗೂಂಡಾಗಳನ್ನು ಸ್ಥಳಾಂತರಗೊಳಿಸಬೇಕಾಗಿದೆ. ಈ ಗೂಂಡಾಗಳು ಜೈಲಿನಲ್ಲಿದ್ದರೂ ಅಪರಾಧಿಗಳ ಸಂಘಟನೆಯನ್ನು ಮಾಡುತ್ತಿದ್ದಾರೆ. ತನಿಖಾ ದಳಕ್ಕೆ ಅವರ ಈ ಸಂಘಟನೆಯನ್ನು ನಾಶಗೊಳಿಸಬೇಕಾಗಿದೆ.
NIA asks MHA to shift 10-12 gangsters to Andamans from North India jails | @mahendermanral https://t.co/DeMWVhJSDy
— Express Punjab (@iepunjab) July 2, 2023
2. ಮೂಲಗಳಿಂದ ಸಿಕ್ಕ ಮಾಹಿತಿಯನುಸಾರ ಆಸ್ಸಾಂನ ದಿಬ್ರೂಗಡ ಕೇಂದ್ರೀಯ ಜೈಲಿನಲ್ಲೂ ಈ ಗೂಂಡಾಗಳನ್ನು ಕಳುಹಿಸಲು ಸರಕಾರ ವಿಚಾರ ಮಾಡುತ್ತಿದೆ. ಸಧ್ಯಕ್ಕೆ ಅಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ `ವಾರಿಸ ಪಂಜಾಬ ದೆ’ ಮುಖಂಡ ಅಮೃತಪಾಲ ಸಿಂಹ ಮತ್ತು ಅವನ ಸಹಚರರು ಬಂಧನದಲ್ಲಿದ್ದಾರೆ.
NIA requests Home Ministry to shift 12 gangsters in jails in north India to Andaman and Nicobar Islandshttps://t.co/otah7czgYq
— OpIndia.com (@OpIndia_com) July 2, 2023
3. ಈ ಮೊದಲು ದಕ್ಷಿಣ ಭಾರತದ ರಾಜ್ಯಗಳ ಜೈಲುಗಳಲ್ಲಿ ಗೂಂಡಾಗಳನ್ನು ಕಳಸುವಂತೆ ದಳಗಳ ಬೇಡಿಕೆಯಾಗಿತ್ತು; ಆದರೆ ಅದಕ್ಕಾಗಿ ಅಲ್ಲಿಯ ರಾಜ್ಯಸರಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಅಂಡ,ಅನ-ನಿಕೊಬಾರ ಕೇಂದ್ರಾಡಳಿತ ಪ್ರದೇಶ ಆಗಿದ್ದರಿಂದ ಅಲ್ಲಿಗೆ ಅನುಮತಿ ಪಡೆಯದೇ ನೇರ ಗೃಹಸಚಿವಾಲಯವು ನಿರ್ಧಾರ ಕೈಗೊಳ್ಳಬಹುದು.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!