
ಇಂಪಾಲ (ಮಣಿಪುರ) – ಇಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ನಿಷೇಧಿತ ಚೀನಾದ ‘ಕೆನಬೋ ಬೈಕ್’ಅನ್ನು ರಾಜಾರೋಷವಾಗಿ ಉಪಯೋಗಿಸಲಾಗುತ್ತಿದೆ. ಉಖರುಲ್ ಮತ್ತು ಕಮಜಾಂಗ್ ಈ ಹಿಂಸಾಚಾರ ಪೀಡಿತ ಗುಡ್ಡಗಾಡ ಜಿಲ್ಲೆಯಲ್ಲಿ ಈ ವಾಹನಗಳ ಉಪಯೋಗ ಆಗುತ್ತಿರುವುದು ಕಂಡು ಬಂದಿದೆ. ವಿಶೇಷ ಗಮನ ನೀಡುವ ಅವಶ್ಯಕತೆ ಇಲ್ಲದಿರುವ ಈ ಬೈಕ್ ಕೇವಲ ೨೫ ಸಾವಿರ ರೂಪಾಯಿಗೆ ದೊರೆಯುತ್ತದೆ. ಇತರ ಭಾರತೀಯ ದ್ವಿಚಕ್ರ ವಾಹನದ ತುಲನೆಯಲ್ಲಿ ಇದು ಬಹಳ ಅಗ್ಗವಾಗಿದೆ. ಮಣಿಪುರದಲ್ಲಿ ಗುಡುಗಾಡ ಪ್ರದೇಶದಲ್ಲಿ ಈ ಬೈಕ್ ನಡೆಸುವುದು ಸುಲಭವಾಗಿದೆ; ಆದ್ದರಿಂದ ಹಿಂಸಾಚಾರ ನಡೆಸುವವರಿಂದ ಇದರ ಉಪಯೋಗ ಮಾಡಲಾಗುತ್ತಿದೆ ಎಂದು ಸಮಾಚಾರವಿದೆ.
೧. ಮಣಿಪುರದ ಹಿಂಸಾಚಾರದಲ್ಲಿ ಪೊಲೀಸರಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿರುವ ವಾಹನಗಳಲ್ಲಿ ಶೇಕಡ ೫೦ ಗಿಂತಲೂ ಹೆಚ್ಚಿನವು ‘ಕೆನಬೋ ಬೈಕ್’ ಆಗಿದೆ. ಗಾಡಿ ಸಂಖ್ಯೆ ಇಲ್ಲದಿರುವ ಈ ವಾಹನಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೂ ಕೂಡ ಸಂಬಂಧಪಟ್ಟವರಿಗೆ ಹೆಚ್ಚು ನಷ್ಟ ಆಗುತ್ತಿಲ್ಲ.
೨. ಈ ಹಿಂದೆ ಈ ವಾಹನಗಳ ಉಪಯೋಗ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗಾಗಿ ಮಾಡಲಾಗುತ್ತಿತ್ತು. ಆದ್ದರಿಂದ ಸರಕಾರವು ಈ ಬೈಕ್ ಗಳನ್ನು ನಿಷೇಧಿಸಿತ್ತು.
೩. ಚೀನಾದಲ್ಲಿನ ಯುನಾನ ಪ್ರದೇಶದಿಂದ ಈ ಬೈಕ್ ನ ಬಿಡಿ ಭಾಗಗಳನ್ನು ಥೈಲ್ಯಾಂಡ್ ನಿಂದ ಮ್ಯಾನ್ಮಾರ್ ಮಾರ್ಗವಾಗಿ ಮಣಿಪುರದ ವಿಶಿಷ್ಟ ದಲ್ಲಾಳಿಯ ಬಳಿ ತಲುಪಿಸಲಾಗುತ್ತದೆ. ಮಣಿಪುರದಲ್ಲಿ ಅದನ್ನು ಜೋಡಿಸಲಾಗುತ್ತದೆ.
ಸಂಪಾದಕರ ನಿಲುವುಒಂದು ರಾಜ್ಯದಲ್ಲಿ ನಿಷೇಧಿಸಿರುವ ವಾಹನಗಳನ್ನು ರಾಜಾರೋಷವಾಗಿ ಉಪಯೋಗಿಸುತ್ತಾರೆ, ಇದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದ ! |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ