ಪೇಶಾವರ (ಪಾಕಿಸ್ತಾನ್) ಇಲ್ಲಿಯ ಸಿಖ್ಕರ ಮೇಲೆ ನಡೆದ ದಾಳಿಯ ಎರಡು ಘಟನೆಯಲ್ಲಿ ಓರ್ವ ಸಾವು ಹಾಗೂ ಓರ್ವನಿಗೆ ಗಾಯ

ಪೇಶಾವರ (ಪಾಕಿಸ್ತಾನ್) – ಕಳೆದ ೨ ದಿನದಲ್ಲಿ ಪೇಶಾವರದಲ್ಲಿ ಸಿಖ್ಕರ ಮೇಲೆ ನಡೆದ ದಾಳಿಯ ೨ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದೂ ಮತ್ತೋರ್ವ ಗಾಯಗೊಂಡಿದ್ದಾರೆ. ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ್ ಪ್ರಾಂತ’ ಈ ಭಯೋತ್ಪಾದಕ ಸಂಘಟನೆವು ದಾಳಿಯ ಹೊಣೆ ಹೊತ್ತುಕೊಂಡಿದೆ. ಮೃತಪಟ್ಟವನ ಹೆಸರು ಮನಮೋಹನ ಸಿಂಹ (೩೪ ವರ್ಷ) ಎಂದು ಆಗಿದೆ. ಖೈಬರ್ ಪಖ್ಟುನಖ್ವಾ ಪ್ರದೇಶದಲ್ಲಿನ ಯಾಕೂಬ ಭಾಗದಲ್ಲಿ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳು ಮನಮೋಹನ ಸಿಂಹ ಇವರ ಮೇಲೆ ಗುಂಡಿನ ದಾಳಿ ನಡೆಸಿದರು. ಆದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ.

ಈ ಘಟನೆಯ ಹಿಂದಿನ ದಿನ ಪೇಶಾವರದಲ್ಲಿ ರಶೀದ ಗಢಿ ಪ್ರದೇಶದಲ್ಲಿ ಬೈಕ್ ಮೇಲೆ ಬಂದಿದ್ದ ಭಯೋತ್ಪಾದಕರು ಸಿಖ ಅಂಗಡಿ ಮಾಲಿಕ ತರಲೋಕ ಸಿಂಹ ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತರಲೋಕ ಸಿಂಹ ಇವರ ಕಾಲಿಗೆ ಗುಂಡುತಾಗಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?