
ಸಹಾರನಪುರ (ಉತ್ತರ ಪ್ರದೇಶ) – ಇಲ್ಲಿಯ ಮಂಡೆಬಾಸ ಗ್ರಾಮದಲ್ಲಿ ಹನುಮಾನ ಚಾಲಿಸಾದ ಪಠಣೆ ಮಾಡಿ ಹಿಂತಿರುಗುವ ಭಜರಂಗದಳದ ಕಾರ್ಯಕರ್ತರ ಮೇಲೆ ಮುಸಲ್ಮಾನ ಗುಂಪಿನವರು ಕಲ್ಲುತೂರಾಟ ಮತ್ತು ಕೋಲುಗಳ ಮೂಲಕ ದಾಳಿ ನಡೆಸಿದರು. ಭಜರಂಗದಳದ ಕಾರ್ಯಕರ್ತರು ಪೊಲೀಸ ಠಾಣೆಯಲ್ಲಿ ಸಲೀಂ, ಅಲಿಜಾನ್, ಸಾಜಿದ, ಆಝಮ, ಅಯಾನ್, ಆಶಿಕ, ಅಹಸಾನ್, ಶೋಯೆಬ್, ಚಾವೆಜ್, ಗುಡ್ಡು, ಫಯಾಜ್ ಮುಂತಾದವರ ವಿರುದ್ಧ ದೂರು ದಾಖಲಿಸಿದ್ದಾರೆ. ಭಜರಂಗದಳದ ಕಾರ್ಯಕರ್ತರಲ್ಲಿ ಒಬ್ಬ ವಿಕಲಾಂಗ ವ್ಯಕ್ತಿಯ ಸಮಾವೇಶ ಕೂಡ ಇದೆ.
‘हनुमान चालीसा का पाठ कर लौट रहे थे बजरंग दल के कार्यकर्ता, मुस्लिम भीड़ ने किया हमला’: पुलिस ने बताया DJ को लेकर हुआ झगड़ा, दोनों पक्षों ने दर्ज कराई शिकायत#bajrangDal #Saharanpur https://t.co/7wpsxY4hAM
— ऑपइंडिया (@OpIndia_in) June 21, 2023
ಈ ಪ್ರಕರಣದಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಜೂನ್ ೨೦ ರ ರಾತ್ರಿ ಬಜರಂಗದಳದ ಕಾರ್ಯಕರ್ತರು ಗ್ರಾಮದಲ್ಲಿನ ಹನುಮಾನ ದೇವಸ್ಥಾನದಲ್ಲಿನ ಹನುಮಾನ ಚಾಲಿಸಾದ ಪಠಣೆ ಮಾಡುತ್ತಿದ್ದರು. ಪಠಣೆ ಮುಗಿಸಿ ಮನೆಗೆ ಹಿಂತಿರುಗುವಾಗ ಮೊದಲೇ ಸಿದ್ದರಿರುವ ಗ್ರಾಮದಲ್ಲಿನ ಮುಸಲ್ಮಾನರು ಅವರು ಮೇಲೆ ದಾಳಿ ಮಾಡಿದರು. ಆಝಮ ಎಂಬ ವ್ಯಕ್ತಿಯು ಗುಂಡಿನ ದಾಳಿ ಮಾಡಿರುವ ಆರೋಪ ಕೂಡ ಇದೆ. ಭಜರಂಗದಳದ ಕಾರ್ಯಕರ್ತರು ಜೀವ ಉಳಿಸಿಕೊಂಡು ಓಡಿ ಹೋದರು. ಈ ದಾಳಿಯಲ್ಲಿ ಸಾಗರ ಯಾದವ, ಹೃತ್ತಿಕ ಯಾದವ ಮತ್ತು ಯುವರಾಜ ಯಾದವ ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ‘ಅವರು ನಮ್ಮನ್ನು ಕೊಲ್ಲುವ ಷಡ್ಯಂತ್ರ ರಚಿಸಿದ್ದರು. ಈ ಹಿಂದೆ ಕೂಡ ಅವರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ’, ಎಂದು ಸಾಗರ ಯಾದವ ಇವರು ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣದ ತನಿಖೆ ಪೊಲೀಸರು ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಹೀಗೆ ನಡೆಯಲು ಸಹಾರನಪುರ ಭಾರತದಲ್ಲಿದೆಯೆ ಅಥವಾ ಪಾಕಿಸ್ತಾನದಲ್ಲಿ ? |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ