ಹಿಂದೂ ರಾಷ್ಟ್ರದ ಅರ್ಥ ದೇಶವನ್ನು ನರಕಕ್ಕೆ ತಳ್ಳುವುದು ! (ಅಂತೆ) – ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ ತಿವಾರಿ

ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ ತಿವಾರಿ ವಿಷಕಾರಿ ಹೇಳಿಕೆ !

ಪಾಟಲಿಪುತ್ರ (ಬಿಹಾರ) – ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದನ್ನು ತಡೆಯುವ ಅವಶ್ಯಕತೆ ಇದೆ. ದೇಶವು ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಒಳ್ಳೆಯದಲ್ಲ; ಏಕೆಂದರೆ ಹಿಂದೂ ರಾಷ್ಟ್ರದಲ್ಲಿ ಅಸಮಾನತೆ ಇದೆ. ಹಿಂದೂಗಳಿಗೆ ಪ್ರಜಾಪ್ರಭುತ್ವದ ಮೇಲೆ ಶ್ರದ್ಧೆಯಿಲ್ಲ. ಹಿಂದೂ ರಾಷ್ಟ್ರದ ಅರ್ಥ ದೇಶವನ್ನು ನರಕಕ್ಕೆ ತಳ್ಳುವುದಾಗಿದೆ, ಎಂದು ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ನಾಯಕ ಶಿವಾನಂದ ತಿವಾರಿ ಇವರು ಹೇಳಿಕೆ ನೀಡಿದರು.

ಅವರು ಮಾತು ಮುಂದುವರಿಸಿ, ಹಿಂದೂ ರಾಷ್ಟ್ರದ ಅರ್ಥ ದೇಶದ ವಿಭಜನೆ ಮಾಡುವುದು ಎಂದೂ ಆಗುತ್ತದೆ. ಹಿಂದೂ ರಾಷ್ಟ್ರ ಆದ ನಂತರ ಸಮಾನತೆಯ ಅಧಿಕಾರ ನಾಶವಾಗುವುದು. ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್ ಇವರು ಯೋಗ್ಯವಾದದ್ದನ್ನೇ ಹೇಳಿದ್ದರು. ಹಿಂದೂ ರಾಷ್ಟ್ರದಿಂದ ಕೆಳಜಾತಿಯ ಜನರ ಸ್ಥಿತಿ ಪ್ರಾಣಿಗಳ ಹಾಗೆ ಆಗುವುದು. ಕೇಳ ಜಾತಿಯ ಜನರ ನೆರಳು ಕೂಡ ಶರೀರದ ಮೇಲೆ ಬಿದ್ದರೆ, ಜನಿವಾರ ಹಾಕಿಕೊಂಡವರಿಗೆ ಅವರ ಧರ್ಮ ಭ್ರಷ್ಟವಾಯಿತು ಎಂದೆನಿಸುತ್ತದೆ. ಹಿಂದೂ ಸಮಾಜವು ಸಮತಾ ಮತ್ತು ಸಮಾನತೆಯ ಮೇಲೆ ವಿಶ್ವಾಸ ಇಡುವುದಿಲ್ಲ, ಎಂದರು .(ಮೂಳೆ ಇಲ್ಲದ ನಾಲಿಗೆ ಹರಿ ಬಿಟ್ಟಿರುವ ತಿವಾರಿ ! ಇಂತಹವರಿಗೆ ಹಿಂದುಗಳು ಕಾನೂನು ರೀತಿಯಲ್ಲಿಯೇ ಉತ್ತರ ಕೇಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

‘ಇಸ್ಲಾಮಿ ರಾಷ್ಟ್ರ ಎಂದರೆ ಸ್ವರ್ಗ’ ಎಂದು ತಿವಾರಿ ಅವರಿಗೆ ಹೇಳುವುದಿದೆಯೇ ? ಅವರು ಭಾರತವನ್ನು ಇಸ್ಲಾಮಿ ದೇಶ ಮಾಡುವ ಭಯೋತ್ಪಾದಕರ ಗುರಿಯ ಬಗ್ಗೆ ಎಂದೂ ಮಾತನಾಡುವುದಿಲ್ಲ, ಎಂಬುದನ್ನು ತಿಳಿದುಕೊಳ್ಳಬೇಕು !

ಹಿಂದೂ ರಾಷ್ಟ್ರವನ್ನು ‘ನರಕ’ ಎನ್ನುವ ಮಾನಸಿಕತೆಯು ಎಷ್ಟು ಹಿಂದೂದ್ರೋಹಿಯಾಗಿದೆ, ಎಂಬುದು ಗಮನಕ್ಕೆ ಬರುತ್ತದೆ ! ಇಂತಹ ಹಿಂದೂಗಳು ಹಿಂದೂ ಧರ್ಮದ ನಿಜವಾದ ವೈರಿ’ಗಳೇ ಆಗಿದ್ದಾರೆ.