ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸಿನ ಮಸಲ್ಮಾನ ಕಾರ್ಯಕರ್ತನ ಹತ್ಯೆ

ಮುಸಲ್ಮಾನ ವ್ಯಕ್ತಿಗೆ ಬಂಧನ

ದಕ್ಷಿಣ ೨೪ ಪರಗನಾ (ಬಂಗಾಳ) – ಮಾಲಾದಾ ಜಿಲ್ಲೆಯ ಕಾಲಿಯಾಚಕ್‌ನ ಇಲ್ಲಿನ ಭಾಂಗಾರ್‌ದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಅವನ ಹೆಸರು ಮುಸ್ತಫಾ ಶೇಖ್ ಎಂದಾಗಿದೆ. ಆತನನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕೊಂದಿರುವುದಾಗಿ ಶೇಖ್‌ನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಅಬ್ದುಲ್ ಮನ್ನಾನನ್ನು ಬಂಧಿಸಲಾಗಿದೆ.