ದೌಂಡ (ಅಹಿಲ್ಯಾನಗರ ಜಿಲ್ಲೆ) ಇಲ್ಲಿನ ಹಿಂದೂ ಕುಟುಂಬದವರ ಹಣೆಗೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

  • ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕಾಗಿ ಮಾಡಲಾಗುವ ಧೂರ್ತತೆ

  • ದೌಂಡನಲ್ಲಿ 3 ಕ್ರೈಸ್ತ ಮಹಿಳೆಯರು ವಶಕ್ಕೆ !

ಅಹಿಲ್ಯಾನಗರ – ಜಿಲ್ಲೆಯ ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿ ಎಂಬಲ್ಲಿ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ `ಕ್ರೈಸ್ತ ಧರ್ಮವನ್ನು ಸ್ವೀಕರಿಸಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಗೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದರು, ಹಾಗೆಯೇ ಮತಾಂತರಿಸಲು ಒತ್ತಾಯಿಸಿದರು. ಈ ಪ್ರಕರಣದಲ್ಲಿ ಮಯೂರ ಮದರೆ ಇವರು ಶ್ರಿಗೊಂದೆ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪೊಲೀಸರು 3 ಮಹಿಳೆಯರ ಮೇಲೆ ದೂರನ್ನು ದಾಖಲಿಸಿದ್ದಾರೆ. ನಮ್ರತಾ ವಾರನಸೆ (ವಯಸ್ಸು 27 ವರ್ಷಗಳು), ಶಾರದಾ ಸೌಂದಡೆ (ವಯಸ್ಸು 27 ವರ್ಷಗಳು) ಮತ್ತು ವೈಶಾಲಿ ಪವಾರ (ವಯಸ್ಸು 36 ವರ್ಷಗಳು) ಇವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕ್ರೈಸ್ತ ಮಹಿಳೆಯರ ಹೆಸರಾಗಿದೆ. (ಮತಾಂತರಗೊಂಡ ಕ್ರೈಸ್ತರು ಅವರ ಹಿಂದೂ ಹೆಸರನ್ನು ಬದಲಾಯಿಸುವುದಿಲ್ಲ. ಏಕೆಂದರೆ ಅವರಿಗೆ ಹಿಂದೂ ಸಮಾಜದಲ್ಲಿದ್ದು ಇತರ ಹಿಂದೂಗಳನ್ನು ಮತಾಂತರಿಸುವುದಿರುತ್ತದೆ ಎನ್ನುವುದನ್ನು ಗಮನಿಸಬೇಕಾಗಿದೆ. ಇಂತಹ ಮತಾಂತರಗೊಂಡ ಹಿಂದೂಗಳು ಸಮಾಜಕ್ಕೆ ಇನ್ನಷ್ಟು ಹೆಚ್ಚು ಅಪಾಯಕಾರಿಯಾಗಿದ್ದಾರೆ ಎನ್ನುವುದನ್ನು ಗಮನಿಸಬೇಕು- ಸಂಪಾದಕರು)

ಕಾಷ್ಟಿಯಲ್ಲಿ ಪ್ರಕಾಶ ಮದರೆ (20 ವರ್ಷಗಳು) ಈ ಯುವಕನು ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದನು. ಅವರ ಮನೆಗೆ ಹೋಗಿ ಈ 3 ಮಹಿಳೆಯರು ಮೇಲಿನಂತೆ ಮತಾಂತರಿಸಲು ಪ್ರಯತ್ನಿಸಿದರು. ಕ್ರೈಸ್ತ ಧರ್ಮವನ್ನು ಸ್ವೀಕರಿಸುವ ಇಚ್ಛೆಯಿಲ್ಲವೆಂದು ಹೇಳಿದರೂ ಆ ಮಹಿಳೆಯರು `ನೀವು ನಮ್ಮ ದೇವರ ಪ್ರಾರ್ಥನೆಯನ್ನು ಮಾಡದಿದ್ದರೆ ನಿಮಗೆ ಕೆಟ್ಟದಾಗುವುದು’ ಎಂದು ಹೇಳಿದರು. (ಹಿಂದೂ ಧರ್ಮದಲ್ಲಿರುವ ದೇವರುಗಳ ಪ್ರಾರ್ಥನೆಯನ್ನು ಮಾಡಿದರೂ ಭಕ್ತರ ಇಚ್ಛೆಗಳು ಪೂರ್ಣಗೊಳ್ಳುತ್ತವೆ. ಕ್ರೈಸ್ತ ಪಂಥದವರಂತೆ ಪ್ರಾರ್ಥನೆ ಮಾಡಿದ ಬಳಿಕ ಎಲ್ಲ ಸಂಕಟಗಳು ದೂರವಾಗುತ್ತವೆ. ಹೀಗಿರುವಾಗ ವಿದೇಶಗಳಲ್ಲಿ ಅನೇಕ ಚರ್ಚಗಳು ಏಕೆ ಪಾಳು ಬೀಳುತ್ತಿವೆ? ಅನೇಕ ಕ್ರೈಸ್ತರು ಚರ್ಚಗೆ ಹೋಗುವುದನ್ನು ನಿಲ್ಲಿಸಿದ್ದಾರೆ . ಇದಕ್ಕೆ ಉತ್ತರವನ್ನು ಕ್ರೈಸ್ತ ಮಹಿಳೆಯರು ನೀಡಬೇಕು- ಸಂಪಾದಕರು) ಪ್ರಕಾಶನು ಈ ವಿಷಯದಲ್ಲಿ ಪ್ರತೀಕ ಪಾಚಪುತೆಯನ್ನು ಕರೆಸಿ ಈ ಪ್ರಕರಣದ ಮಾಹಿತಿಯನ್ನು ನೀಡಿದನು. ಅವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಮಹಿಳೆಯರಲ್ಲಿ ವಿಚಾರಿಸಿದಾಗ ಅವರ ಮಾತಿನಲ್ಲಿ ಕೆಲವು ಸಂಶಯಾಸ್ಪದ ವಿಷಯಗಳು ಕಂಡು ಬಂದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ಪ್ರಕರಣದ ಮುಖ್ಯ ಸೂತ್ರಧಾರನನ್ನು ಪೊಲೀಸರು ಶೋಧಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ರಾಜ್ಯದಲ್ಲಿ ಹಿಂದುತ್ವನಿಷ್ಠರ ಸರಕಾರ ಇರುವಾಗ ಕ್ರೈಸ್ತರಿಗೆ ಇಂತಹ ಧೈರ್ಯವಾದರೂ ಎಲ್ಲಿಂದ ಬರುತ್ತದೆ ?
  • ಹಿಂದೂಗಳ ಮತಾಂತರಕ್ಕಾಗಿ ವಿವಿಧ ಕೃತ್ಯಗಳನ್ನು ನಡೆಸುವ ಕ್ರೈಸ್ತರನ್ನು ಸರಿದಾರಿಗೆ ತರಲು ಕಠಿಣ ಮತಾಂತರನಿಷೇಧ ಕಾನೂನು ರಚಿಸಿ ಅವರನ್ನು ಕಾರಾಗೃಹಕ್ಕೆ ತಳ್ಳುವುದು ಆವಶ್ಯಕ !