|

ಅಯೋಧ್ಯ (ಉತ್ತರಪ್ರದೇಶ) :ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಡಿಸೆಂಬರ್ ೧೫, ೨೦೨೩ ರಿಂದ ಜನವರಿ ೨೬, ೨೦೨೪ ರ ಕಾಲಾವಧಿಯಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಿಂದ ಮಾಡಿಸುವರು. ಈ ಸಮಾರಂಭದ ದಿನಾಂಕ ಇನ್ನು ನಿಗದಿಯಾಗಿಲ್ಲ. ದೇಶಾದ್ಯಂತ ೭ ದಿನಗಳವರೆಗೆ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲಾಗುವುದು, ಎಂದು ನ್ಯಾಸದ ಕಾರ್ಯದರ್ಶಿ ಚಂಪತರಾಯ ಇವರು ಮಾಹಿತಿ ನೀಡಿದರು.
गर्भगृह में रामलला की प्रतिमा की प्राण प्रतिष्ठा के लिए पीएम नरेंद्र मोदी को आमंत्रित किया जाएगा.#Uttarpradesh #RamMandir @senshilpi https://t.co/7zTtajCPsc
— AajTak (@aajtak) June 1, 2023
ಚಂಪತ ರಾಯ ಇವರು ಮಾತು ಮುಂದುವರಿಸಿ,
೧. ಶ್ರೀರಾಮ ಮಂದಿರದ ನೆಲಮಾಳಿಗೆ ಮತ್ತು ಗರ್ಭಗುಡಿಯದ ಕೆಲಸ ಡಿಸೆಂಬರ್ ೧೫ ರ ವರೆಗೆ ಪೂರ್ಣಗೊಳ್ಳುವುದು. ನೆಲಮಾಳಿಗೆಯ ಕಟ್ಟಡ ಕಾಮಗಾರಿ ಶೇಖಡಾ ೮೫ ರಷ್ಟು ಪೂರ್ಣಗೊಂಡಿದೆ.
೨. ನ್ಯಾಸದ ಕೋಷಾಧ್ಯಕ್ಷರಾದ ಪ .ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರು ಈ ಸಮಾರಂಭದ ಆಮಂತ್ರಣ ಪತ್ರಿಕೆ ಸಿದ್ದಗೊಳಿಸುವರು, ಅದರ ಮೇಲೆ ಮಹಾಂತ ನೃತ್ಯ ಗೋಪಾಲದಾಸರು ಸಹಿ ಮಾಡುವವರಿದ್ದಾರೆ .
೩. ದೇಶಾದ್ಯಂತ ೭ ದಿನಗಳ ನಡೆಯುವ ಈ ಮಹೋತ್ಸವಕ್ಕೆ ಸಂತರಿಗೆ ಧರ್ಮಚಾರ್ಯರಿಗೆ ಆಮಂತ್ರಣ ನೀಡಲಾಗುವುದು.
ರಾಮಲಲ್ಲನ ಮೂರ್ತಿಯ ಎತ್ತರ ೮ ಅಡಿ ಇರಲಿದೆ !
ರಾಮಲಲ್ಲನ ಮೂರು ಮೂರ್ತಿಗಳು ಸಿದ್ಧಗೊಳಿಸಲಾಗುತ್ತಿದೆ. ಅದಕ್ಕಾಗಿ ಕರ್ನಾಟಕದಿಂದ 2 ಕರಿ ಕಲ್ಲು ಮತ್ತು ರಾಜಸ್ಥಾನದಿಂದ ಅಮೃತಶಿಲೆಯ ಬಿಳಿ ಕಲ್ಲು ಉಪಯೋಗಿಸಲಾಗುತ್ತಿದೆ. ಇದರಲ್ಲಿ ಗರ್ಭಗುಡಿಯಲ್ಲಿ ಇಡಲು ಯಾವ ಮೂರ್ತಿಯ ಆಯ್ಕೆ ಆಗುವುದು ? ಅದು ಇನ್ನೂ ಖಚಿತಗೊಂಡಿಲ್ಲ. ಈ ಮೂರ್ತಿಗಳು ಸಿದ್ದಗೊಳ್ಳಲು ಸರಾಸರಿ ೪ ತಿಂಗಳ ಕಾಲಾವಧಿ ಬೇಕಾಗುವುದು. ಕರ್ನಾಟಕದ ಶಿಲ್ಪಿ ಗಣೇಶ್ ಎಲ್ ಭಟ ಮತ್ತು ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಇವರ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದೆ. ಶಿಲ್ಪಿ ಗಣೇಶ ಭಟ ಇವರು, ಈ ಮೂರ್ತಿ ೫೧ ಇಂಚು ಎತ್ತರ ತಯಾರಿಸುವುದಿದೆ. ಮೂರ್ತಿ ಸ್ಥಾಪನೆಯಾದ ನಂತರ ಅದರ ಎತ್ತರ ೮ ಅಡಿ ಇರಬಹುದು ಎಂದು ಹೇಳಿದ್ದಾರೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!