ಡ್ಯಾಂ ನಲ್ಲಿ ಬಿದ್ದಿದ್ದ ತನ್ನ ಮೊಬೈಲ್ಅನ್ನು ಹುಡುಕಲು ಲಕ್ಷಾಂತರ ಲೀಟರ ನೀರನ್ನು ವ್ಯರ್ಥಗೊಳಿಸಿದ ಆಹಾರ ನಿರೀಕ್ಷಕನ ಅಮಾನತ್ತು !

ರಾಜೇಶ್ ವಿಶ್ವಾಸ್, ಛತ್ತೀಸ್ ಗಢದಲ್ಲಿ ಆಹಾರ ನಿರೀಕ್ಷಕ

ಕಾಂಕೇರ (ಛತ್ತೀಸಗಡ) – ಇಲ್ಲಿನ ಆಹಾರ ನಿರೀಕ್ಷಕ ರಾಜೇಶ ವಿಶ್ವಾಸ ಇವರ 1 ಲಕ್ಷ ರೂಪಾಯಿಯ ಮೊಬೈಲ ಇಲ್ಲಿನ ಖೇರಕಟ್ಟಾ-ಪರಲಕೋಟ ಡ್ಯಾಂ ನಲ್ಲಿ ಬಿದ್ದಾಗ ಅದನ್ನು ಹುಡುಕಲು 4 ದಿನಗಳ ವರೆಗೆ ಪಂಪ್ ಮೂಲಕ ನೀರನ್ನು ಹೊರತೆಗೆಯಲಾಯಿತು. ತದನಂತರ ಅವನ ಮೊಬೈಲ ಸಿಕ್ಕಿತು. ಈ ಡ್ಯಾಂ 15 ಅಡಿ ಆಳವಿದೆ. ಅದರಲ್ಲಿ 10 ಅಡಿ ವರೆಗಿನ ನೀರನ್ನು ಹೊರತೆಗೆಯಲಾಯಿತು. ಹೊರತೆಗೆದ ನೀರಿನಿಂದ ನೂರಾರು ಎಕರೆ ಹೊಲಗಳಿಗೆ ನೀರು ಪೂರೈಕೆಯಾಗಬಹುದಾಗಿತ್ತು. ಈ ಸಂದರ್ಭದಲ್ಲಿ ದೂರು ದಾಖಲಿಸಿದ ಬಳಿಕ ರಾಜೇಶ ವಿಶ್ವಾಸನನ್ನು ಅಮಾನತ್ತುಗೊಳಿಸಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ.

ಸಂಪಾದಕರ ನಿಲುವು

ಇಂತಹವರಿಗೆ ಅಮಾನತ್ತಲ್ಲ, ಬಂಧಿಸಿ ಅನೇಕ ದಿನಗಳ ಕಾಲ ನೀರಿಲ್ಲದೇ ಇರುವಂತೆ ಶಿಕ್ಷೆಯನ್ನು ವಿಧಿಸಬೇಕು !