ಎಮ್.ಐ.ಎಮ್. ಮತ್ತು ಭಾಜಪ ಸದಸ್ಯರಲ್ಲಿ ಮಾರಾಮಾರಿ

ಮೇರಠ (ಉತ್ತರಪ್ರದೇಶ) – ಇಲ್ಲಿಯ ಪುರಸಭೆ ಮತ್ತು ನಗರ ಪಂಚಾಯತಿಯ ಹೊಸದಾಗಿ ಚುನಾಯಿತಗೊಂಡ ಸದಸ್ಯರ ಪ್ರಮಾಣವಚನದ ಸಮಾರಂಭದಲ್ಲಿ `ವಂದೇ ಮಾತರಮ್’ ಹಾಡಲು ಮತ್ತು ಆ ಸಮಯದಲ್ಲಿ ಎದ್ದು ನಿಲ್ಲಲು ಎಮ್.ಐ.ಎಮ್. ಸದಸ್ಯರು ವಿರೋಧಿಸಿದರು. ಆ ಸಮಯದಲ್ಲಿ ಭಾಜಪದ ಸದಸ್ಯರು ವಿರೋಧಿಸಿದಾಗ ಇಬ್ಬರ ನಡುವೆ ಮಾರಾಮಾರಿ ನಡೆಯಿತು. ತದನಂತರ ಪೊಲೀಸರು ಹಸ್ತಕ್ಷೇಪ ಮಾಡಿ ಎಲ್ಲರನ್ನೂ ಸಭಾಗೃಹದಿಂದ ಹೊರಗೆ ಕಳಿಸಿದರು. ಇಲ್ಲಿಯ ಚೌಧರಿ ಚರಣಸಿಂಹ ವಿಶ್ವವಿದ್ಯಾಲಯದ ನೇತಾಜಿ ಸುಭಾಷಚಂದ್ರ ಸಭಾಗೃಹದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಮಾಣವಚನ ಸಮಾರಂಭದಲ್ಲಿ ಆಯುಕ್ತ ಜೆ. ಸೆಲ್ವಾ ಕುಮಾರಿ ಮಹಾಪೌರ ಹಾಗೂ ನಗರಸೇವಕರಿಗೆ ಪ್ರಮಾಣವಚನವನ್ನು ಬೋಧಿಸುವವರಿದ್ದರು. ಆ ಸಮಯದಲ್ಲಿ ಎಮ್.ಐ.ಎಮ್. ಸದಸ್ಯರು `ನಾವು ಭಾರತ ಜಿಂದಾಬಾದ ಹೇಳುತ್ತೇವೆ; ಆದರೆ ವಂದೇ ಮಾತರಮ್ ಹೇಳುವುದಿಲ್ಲ. ಇದು ಭಾಜಪ ಕಾರ್ಯಕ್ರಮವಲ್ಲ. ಪುರಸಭೆಯ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು. ತದನಂತರ ಈ ವಿವಾದ ಪ್ರಾರಂಭವಾಯಿತು.
(ಸೌಜನ್ಯ : ABP NEWS)
ಸಂಪಾದಕರ ನಿಲುವು* ಕೇಂದ್ರ ಸರಕಾರವು ಈಗ `ವಂದೇ ಮಾತರಮ್’ಗೆ ರಾಷ್ಟ್ರಗೀತೆಯಂತೆ ಸ್ಥಾನಮಾನಯನ್ನು ನೀಡಿ ಅದನ್ನು ಹಾಡುವುದು ಅನಿವಾರ್ಯಗೊಳಿಸುವ ನಿಯಮವನ್ನು ಮಾಡಬೇಕು ಮತ್ತು ಹೇಳದೇ ಇರುವವರ ಮೇಲೆ ದೇಶದ್ರೋಹದ ದೂರನ್ನು ದಾಖಲಿಸಿ ಕಾರಾಗೃಹಕ್ಕೆ ದಬ್ಬುವ ಶಿಕ್ಷೆ ನೀಡಲು ಕಾನೂನಿನಲ್ಲಿ ನಿಬಂಧನೆಗಳನ್ನು ರಚಿಸಬೇಕು ಎಂದೇ ದೇಶಭಕ್ತರಿಗೆ ಅನಿಸುತ್ತದೆ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ