ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದ ಕರ್ನಾಟಕದ ಉಪಮುಖ್ಯಮಂತ್ರಿಯ ಛಾಯಾಚಿತ್ರ ಪ್ರಸಾರ ಮಾಡಿ ಹಿಂದುತ್ವನಿಷ್ಠ ನಟ ಶರತ ಪೋಕ್ಷೆ ಇವರ ಪ್ರಶ್ನೆ !

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಮುಂಬಯಿ – ಇವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪ್ರಮಾಣವಚನದ ಮೊದಲು ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದು ಅವನ ಆಶೀರ್ವಾದ ಪಡೆದ ನಂತರ ಅವರು ಉಪಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಕ್ಷ ಇಷ್ಟು ಬಹಿರಂಗವಾಗಿ ಎಲ್ಲವೂ ಮಾಡುತ್ತಿದ್ದರು ಕೂಡ ಹಿಂದೂಗಳು ಅವರಿಗೆ ಮತ ನೀಡುತ್ತಾರೆ ಇದಕ್ಕಿಂತ ಬೇರೆ ದುರದೃಷ್ಟಕರ ಏನು ಇರಲು ಸಾಧ್ಯ ?’ ಎಂದು ಪ್ರಸಿದ್ಧ ಹಿಂದುತ್ವನಿಷ್ಠ ನಟ ಶರದ ಪೊಂಕ್ಷೇ ಇವರು ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕಿ ಅಧಿಕಾರ ಪಡೆದಿದೆ. ಮೇ ೨೦ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ನಟ ಪೋಂಕ್ಷೇ ಇವರು ಮೇಲಿನ ಛಾಯಾಚಿತ್ರ ಪ್ರಸಾರಗೊಳಿಸಿದ್ದಾರೆ.

ಸಂಪಾದಕರ ನಿಲುವು

ಹಿಂದೂಗಳು ಕಾಂಗ್ರೆಸ್ಸಿಗೆ ಮತ ನೀಡುವುದು ಇದಕ್ಕಿಂತ ಬೇರೆ ದುರದೃಷ್ಟಕರ ಏನಿದೆ ?