ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ಸಿಸಿಟಿವಿ’ ಅಳವಡಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆದೇಶ! : Karnataka Temples CCTV

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು – ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದಾನದ ಹಣ ಕಳ್ಳತನವಾದ ಘಟನೆಯ ನಂತರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ಸಿಸಿಟಿವಿ’ ಅಳವಡಿಸಲು ಆದೇಶಿಸಿದ್ದಾರೆ. ರಾಜ್ಯದ ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ರಾಜ್ಯ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹುಂಡಿ ಇರುವ ಸ್ಥಳಗಳು ಮತ್ತು ಹಣ ಎಣಿಕೆ ಮಾಡುವ ಸ್ಥಳಗಳೂ ಸೇರಿದಂತೆ ದೇವಾಲಯದ ಎಲ್ಲಾ ಭಾಗಗಳಲ್ಲಿ ‘ಸಿಸಿಟಿವಿ’ಗಳನ್ನು ಅಳವಡಿಸಲಾಗುವುದು. ದೇವಾಲಯದ ಚಟುವಟಿಕೆಗಳ ಮೇಲೆ 24 ಗಂಟೆಯೂ ನಿಗಾ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

'ಸೆಕ್ಯುಲರ್' ಸರಕಾರದ ದೇವಾಲಯಗಳಲ್ಲಿ 'ಸಿಸಿಟಿವಿ' ಅಳವಡಿಸುವ ನಿರ್ಧಾರ ಸ್ವಾಗತಾರ್ಹ; ಆದರೆ ಸರಕಾರದಿಂದ ಇಂತಹದೇ ವ್ಯವಸ್ಥೆಯನ್ನು ಚರ್ಚ್ ಮತ್ತು ಮಸೀದಿಗಳಲ್ಲಿಯೂ ಮಾಡುವುದು ನಿರೀಕ್ಷಿತವಾಗಿದೆ!