ವಿಹಿಂಪ, ಬಜರಂಗದಳ ಸೇರಿ ಸಮಾಜದ ಜನರು ಮಾಡಿದ ಪ್ರತಿಭಟನೆಯ ಪರಿಣಾಮ !

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಮಾಜಿ ಭಾಜಪ ಶಾಸಕ ಮತ್ತು ಪೌರಿ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಯಶಪಾಲ ಬೇನಮ ಅವರು ವಿಹಿಂಪ ಮತ್ತು ಬಜರಂಗದಳದ ಪ್ರತಿಭಟನೆಯ ನಂತರ ಮುಸ್ಲಿಂ ಹುಡುಗನೊಂದಿಗೆ ತಮ್ಮ ಮಗಳ ನಿಶ್ಚಯಿತ ಮದುವೆಯನ್ನು ರದ್ದುಗೊಳಿಸಿದ್ದಾರೆ.
3 ತಿಂಗಳ ಹಿಂದೆ ಬೇನಾಮ ತನ್ನ ಮಗಳ ಮದುವೆಯನ್ನು ಆಕೆಯೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಮುಸ್ಲಿಂ ಹುಡುಗನೊಂದಿಗೆ ನಿಶ್ಚಯಿಸಿದ್ದರು. ಮೇ 28ರಂದು ಈ ಮದುವೆ ನಡೆಯಬೇಕಿತ್ತು. ಆಮಂತ್ರಣಗಳನ್ನು ವಿತರಿಸಲಾಗಿತ್ತು, ಮತ್ತು ಮದುವೆಯ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಈ ಪ್ರೇಮ ವಿವಾಹದ ಬಗ್ಗೆ ಎಲ್ಲರಿಗೂ ಮುನ್ಸೂಚನೆ ನೀಡಿದ್ದರು. ಈ ವಿವಾಹದ ವಿಚಾರ ತಿಳಿದ ನಂತರ ಸಮಾಜದ ಅನೇಕರು ಈ ಅಂತರ್ ಧರ್ಮೀಯ ವಿವಾಹವನ್ನು ವಿರೋಧಿಸತೊಡಗಿದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಹಲವರು ನೇರವಾಗಿ ಬೇನಾಂ ಮನೆಗೆ ತೆರಳಿದರು. ಆ ನಂತರ ಸದ್ಯಕ್ಕೆ ಈ ಮದುವೆಯನ್ನು ರದ್ದುಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸಂಘದ ಹಲವು ಪದಾಧಿಕಾರಿಗಳ ದೂರವಾಣಿ ಕರೆ !
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವು ಪದಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದಾರೆ ಎಂದೂ ಯಶ್ಪಾಲ್ ಬೇನಮ್ ಹೇಳಿದ್ದಾರೆ.
#Uttarakhand BJP leader cancels daughter’s wedding to Muslim man
Here’s why…https://t.co/QmgoBSWciE
— DNA (@dna) May 22, 2023
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed