ಹಣೆಯ ಮೇಲೆ ತಿಲಕ, ಮನೆಯ ಹೊರಗೆ ಧರ್ಮಧ್ವಜವನ್ನು ಹಾರಿಸಿದರೆ, ಭಾರತವು ಹಿಂದೂ ರಾಷ್ಟ್ರದ ಕಡೆಗೆ ಮಾರ್ಗಕ್ರಮಣವಾಗುವುದು !

ಹಿಂದೂಗಳಿಗೆ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಕರೆ !

ಪಾಟಲಿಪುತ್ರ (ಬಿಹಾರ) – ಬಿಹಾರ 13 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ೫ ಕೋಟಿ ಜನ ಮಾತ್ರ ಹಣೆಯ ಮೇಲೆ ತಿಲಕ ಹಚ್ಚಿ ಹೊರಗೆ ಬಂದು ಮನೆಯ ಮೇಲೆ ಧರ್ಮ ಧ್ವಜವನ್ನು ಹಾರಿಸಿದರೆ, ಭಾರತವು ಹಿಂದೂ ರಾಷ್ಟ್ರದ ಕಡೆಗೆ ಮಾರ್ಗಕ್ರಮಣವಾಗುವುದು, ಎಂದು ನೌಬತ್‌ಪುರದಲ್ಲಿ ನಡೆಯುತ್ತಿರುವ ಹನುಮಂತ ಕಥಾದಲ್ಲಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಲಕ್ಷಾಂತರ ಹಿಂದೂಗಳಿಗೆ ಕರೆ ನೀಡಿದರು, ಇದು ಈ ಕಥೆಯ ನಾಲ್ಕನೇ ದಿನವಾಗಿತ್ತು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಮಾತನ್ನು ಮುಂದುವರೆಸುತ್ತಾ,

೧. ನಮ್ಮ ಸಂಸ್ಕೃತಿಯನ್ನು ನಾವೇ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿಯೊಬ್ಬ ಸನಾತನೀ ವ್ಯಕ್ತಿಯೂ ಶ್ರೀರಾಮಚರಿತಮಾನಸದ ಪಾರಾಯಣ, ಹಣೆಯ ಮೇಲೆ ತಿಲಕ ಮತ್ತು ಮನೆಯ ಹೊರಗೆ ಧರ್ಮಧ್ವಜವನ್ನು ಹಾರಿಸಬೇಕು. ಮನೆಯ ಹೊರಗೆ ಧರ್ಮಧ್ವಜದಿಂದ ಹನುಮಂತನು ನಿಮ್ಮ ರಕ್ಷಣೆ ಮಾಡುವನು. ಯಾವ ಮನೆಯಲ್ಲಿ ಶ್ರೀ ರಾಮನನ್ನು ಪೂಜಿಸುತ್ತಾರೆ ಆ ಮನೆಯನ್ನು ರಕ್ಷಣೆಯನ್ನು ಹನುಮಂತನು ಮಾಡುತ್ತಾನೆ ಮತ್ತು ಮನೆಯಲ್ಲಿನ ಎಲ್ಲಾ ವಿಪತ್ತುಗಳನ್ನುದೂರು ಮಾಡುತ್ತಾನೆ.

೨. ಹಿಂದೂ ರಾಷ್ಟ್ರ ಸ್ಥಾಪನೆಯ ನನ್ನ ಸಂಕಲ್ಪ ಬಿಹಾರದಲ್ಲಿ ಈಡೇರಿದಂತಿದೆ. ನಾನು ಜನರನ್ನು ಜಾಗೃತಗೊಳಿಸಲು ಹೊರಟಿದ್ದೇನೆ. ಎಲ್ಲಿಯ ವರೆಗೆ ಜನರು ಜಾಗೃತಗೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ನಾನು ಅವರನ್ನು ಜಾಗೃತ ಗೊಳಿಸುತ್ತಿರುವೆ ಎಂದು ಹೇಳಿದರು.