ಝಾಕೀರ ನಾಯಿಕನ ವಿಡಿಯೋ ತೋರಿಸಲಾಯಿತು !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಉಗ್ರ ನಿಗ್ರಹ ದಳವು `ಹಿಜ್ಬ-ಉತ–ತಹರೀರ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಈ ವಿಷಯದ ಕೆಲವು ಗೌಪ್ಯ ಮಾಹಿತಿಗಳು ಈಗ ಬಹಿರಂಗವಾಗುತ್ತಿದೆ. ಇದರಲ್ಲಿ ಕೆಲವು ಜನರು ಹಿಂದೂಗಳಿದ್ದರು ಎನ್ನುವುದು ಸ್ಪಷ್ಟವಾಗಿದೆ. ಈ ಸಂಘಟನೆಯ ಮುಖಂಡ ಮಹಮ್ಮದ ಸಲೀಮ ಮೊದಲು ಸೌರಭ ರಾಜವೈದ್ಯ ಹೆಸರಿನ ಹಿಂದೂ ಯುವಕನಾಗಿದ್ದನು. ಭೋಪಾಲದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಅವನಿಗೆ ಮುಸಲ್ಮಾನ ಪ್ರಾಧ್ಯಾಪಕ ಕಮಾಲನು ಇಸ್ಲಾಂ ವಿಷಯದಲ್ಲಿ ಮಾಹಿತಿಯನ್ನು ನೀಡಿ ಅವನ ಬ್ರೈನ್ ವಾಷ್ ಮಾಡಿದನು.
Jihad brainwash meets: Suspects on overdrive https://t.co/LZHlyNk4i3
— TOI Hyderabad (@TOIHyderabad) May 16, 2023
ಹಾಗೆಯೇ ಭಯೋತ್ಪಾದಕರ ಆದರ್ಶನಾಗಿರುವ ಝಾಕೀರ ನಾಯಿಕನ ವಿಡಿಯೋ ತೋರಿಸಿದನು. ತದನಂತರ ಅವನು ಕುಟುಂಬದವರೊಂದಿಗೆ ಇಸ್ಲಾಂ ಧರ್ಮ ಸ್ವೀಕರಿಸಿದನು. ಸೌರಭನ ತಂದೆ ಡಾ. ಅಶೋಕ ರಾಜವೈದ್ಯರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಂತರರಾಷ್ಟ್ರೀಯ ಷಡ್ಯಂತ್ರದ ಮೂಲಕ ಹಿಂದೂಗಳ ಮತಾಂತರವಾಗುತ್ತಿದೆಯೆಂದು ಹೇಳಿದರು.
(ಸೌಜನ್ಯ : ANI)
ಸಂಪಾದಕೀಯ ನಿಲುವುಹಿಂದೂ ಹುಡುಗಿಯಷ್ಟೇ ಅಲ್ಲ, ಹಿಂದೂ ಯುವಕರ ಬ್ರೈನ್ ವಾಷ್ ಮಾಡಿ ಅವರನ್ನು ಮತಾಂತರಗೊಳಿಸಿ ಜಿಹಾದಿ ಭಯೋತ್ಪಾದಕರನ್ನಾಗಿ ಮಾಡುವ ಈ ಷಡ್ಯಂತ್ರ್ಯ ಶಾಶ್ವತವಾಗಿ ನಷ್ಟಗೊಳಿಸಲು ಹಿಂದೂ ರಾಷ್ಟ್ರವೊಂದೇ ಪರಿಹಾರವಾಗಿದೆ ! ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೇ ಇದ್ದರಿಂದ ಅವರಿಗೆ ತಮ್ಮ ಧರ್ಮದ ಮಹತ್ವ ತಿಳಿಯುವುದಿಲ್ಲ ಮತ್ತು ಅವರಿಗೆ ಧರ್ಮದ ಬಗ್ಗೆ ಅಭಿಮಾನವೂ ಅನಿಸುವುದಿಲ್ಲ. ಇದರ ದುರುಪಯೋಗವನ್ನು ಮತಾಂಧ ಮುಸಲ್ಮಾನರು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಬೇಕು ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ