
ನರ್ಮದಾಪುರಮ್ (ಮಧ್ಯಪ್ರದೇಶ) – ಭಾರತ ಸರಕಾರ ಹಿಂದೂಗಳ ಕೈ ಸೇರುವ ಹಾಗೆ ಕಾಳಜಿ ವಹಿಸಲಾಗುವುದು. ದೇಶದಲ್ಲಿ ಹಿಂದೂ ಬಿಟ್ಟರೆ ಬೇರೆ ಯಾರಿಗೂ ದೇಶದ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿ, ನ್ಯಾಯಾಧೀಶರು ಆಗದಿರುವಂತೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವೆವು. ಇದೆಲ್ಲವೂ ಸಾಧ್ಯವಿದೆ, ಎಂದು ‘ಅಂತರಾಷ್ಟ್ರೀಯ ಹಿಂದೂ ಪರಿಷತ್ತಿನ’ ಅಧ್ಯಕ್ಷ ಡಾ. ಪ್ರವೀಣ ತೊಗಾಡಿಯ ಇವರು ಹೇಳಿಕೆ ನೀಡಿದರು. ‘ಹಿಂದೂ ಸಾಥಿ’ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಇಲ್ಲಿ ಬಂದಿದ್ದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಮುಸಲ್ಮಾನರ ಸಂಖ್ಯೆ ಹೆಚ್ಚಿಸಲು ಬಿಡುವುದಿಲ್ಲ !
ಡಾ. ಪ್ರವೀಣ ತೊಗಾಡಿಯ ಮಾತು ಮುಂದುವರೆಸಿ, ನಾವು ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿಸಲು ಬಿಡುವುದಿಲ್ಲ. ೨ ಕ್ಕಿಂತ ಹೆಚ್ಚಿನ ಮಕ್ಕಳು ಪಡೆಯುವವರೆಗೆ ಸರಕಾರದ ನೌಕರಿ, ಸರಕಾರಿ ಆಹಾರ, ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ಹಾಗೂ ಬ್ಯಾಂಕಿನ ಸಾಲ ಮುಂತಾದ ಯಾವುದೇ ಸೌಲಭ್ಯ ನೀಡುವುದಿಲ್ಲ. ಅದರ ನಂತರ ಕೂಡ ಅವರು ಮಕ್ಕಳನ್ನು ಪಡೆದರೆ, ಆಗ ಅವರಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಲಾಗುವುದು ಎಂದು ಹೇಳಿದರು.
”2 से ज़्यादा बच्चे पैदा करने वाले मुसलमानों को 10 साल के लिए जेल में डालेंगे”
अंतरराष्ट्रीय हिंदू परिषद के अध्यक्ष प्रवीण तोगड़िया का बयान
Pravin Togadia | #PravinTogadia pic.twitter.com/PWOBg9mZmY
— News24 (@news24tvchannel) May 12, 2023
ಹಿಂದೂಗಳ ಪ್ರಭೋದನೆಗಾಗಿ ದೇಶಾದ್ಯಂತ ೧ ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗುವುದು !
ಅಂತರಾಷ್ಟ್ರೀಯ ಹಿಂದೂ ಪರಿಷತ್ತಿನ ಮೂಲಕ ಕೋಟ್ಯಾಂತರ ಹಿಂದೂಗಳಿಗಾಗಿ ಸಮೃದ್ಧಿ ಸೇವಾ ಗೌರವ, ಸಹಯೋಗ ಸಂಸ್ಕಾರದ ವ್ಯವಸ್ಥೆಯನ್ನು ಭಾರತದಲ್ಲಿ ೨೪ ಗಂಟೆ ಲಭ್ಯ ಗೊಳಿಸಲಾಗುವುದು. ನಮ್ಮ ಖಾಸಗಿ ಕಾಲ್ ಸೆಂಟರ್ ಗಳಿಗೆ ಸಂಪರ್ಕ ಮಾಡಿದ ನಂತರ ಸಂತ್ರಸ್ತರಿಗೆ ತ್ವರಿತ ಸಹಾಯ ಮಾಡಲಾಗುವುದು. ರಾಮಜನ್ಮ ಭೂಮಿಗಾಗಿ ನಾವು ಯಶಸ್ವಿ ಆಂದೋಲನ ನಡೆಸಿದವು. ಈಗ ನಾವು ಹಿಂದೂಗಳ ಪ್ರಬೋಧನೆಯ ಎರಡನೆಯ ಹಂತದ ಕಾರ್ಯ ಮಾಡುತ್ತಿದ್ದೇವೆ. ಅದಕ್ಕಾಗಿ ದೇಶಾದ್ಯಂತ ೧ ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ೧ ಕೋಟಿ ಹಿಂದೂಗಳು ಸಹಭಾಗಿ ಆಗುವವರು. ಹನುಮಾನ ಚಾಲಿಸಾದ ಮೂಲಕ ಈ ಕಾರ್ಯದಲ್ಲಿ ಎಲ್ಲರನ್ನು ಜೋಡಿಸಲಾಗುವುದು. ಈ ಕೇಂದ್ರದ ಸಹಾಯದಿಂದ ಬಡ ಹಿಂದೂ ಕುಟುಂಬಗಳಿಗೆ ಉಚಿತ ಆರೋಗ್ಯ, ಶಿಕ್ಷಣ ಮತ್ತು ಕಾನೂನು ಸಹಾಯ ನೀಡಲಾಗುವುದು ಎಂದು ಹೇಳಿದರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath