
ದುರ್ಗ (ಛತ್ತೀಸಗಡ) – ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು. (ಗಡಿಯಲ್ಲಿ ತಂತಿಯನ್ನು ಕತ್ತರಿಸಿ ಬಾಂಗ್ಲಾದೇಶಿಯರಿಗೆ ಭಾರತದಲ್ಲಿ ಪ್ರವೇಶಿಸುವುದು, ಗಡಿಭದ್ರತಾ ಪಡೆಗೆ ಲಜ್ಜಾಸ್ಪದ- ಸಂಪಾದಕರು) `ತದನಂತರ 1 ಸಾವಿರ 500 ರೂಪಾಯಿಗಳಲ್ಲಿ ಆಧಾರ ಕಾರ್ಡ ತಯಾರಿಸಿಕೊಂಡು ದೇಶದ ವಿವಿಧ ಪ್ರದೇಶಗಳಿಗೆ ಹೋಗಿ ನಾವು ಕಳ್ಳತನ ಮಾಡುತ್ತಿದ್ದೆವು’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡರು. (ಇದರಿಂದ ಬಂಗಾಲದಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆಯೆಂದು ಗಮನಕ್ಕೆ ಬರುತ್ತಿದೆ – ಸಂಪಾದಕರು)
ಛತ್ತೀಸಗಡದ ದುರ್ಗ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 6 ರಂದು ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಗಾಲದಿಂದ ಬಂಧಿಸಿದರು. ಮಹಮ್ಮದ ಹಸಮತ ಖಲಿಫಾ ಮತ್ತು ಅಲ್ತಾಫ ಹುಸೇನ ಹೆಸರಿನ ಈ ಇಬ್ಬರು ಆರೋಪಿಗಳಲ್ಲಿ ಮಹಮ್ಮದ ಹಸಮತ ಖಲಿಫಾ ನಾಲ್ಕು ತಿಂಗಳಿನ ಹಿಂದೆ ಭಾರತದಲ್ಲಿ ನುಸುಳಿರುವುದಾಗಿ ಒಪ್ಪಿಕೊಂಡನು. ಗಡಿಯಲ್ಲಿ ನುಸುಳಲು ದಲ್ಲಾಳಿಗೆ 5 ಸಾವಿರ ರೂಪಾಯಿಗಳನ್ನು ನೀಡುತ್ತೇವೆಯೆಂದು ಪೊಲೀಸರಿಗೆ ಹೇಳಿದ. ತದನಂತರ ದಲ್ಲಾಳಿ ಗಡಿಯಲ್ಲಿ ತಂತಿಯನ್ನು ಕತ್ತರಿಸುತ್ತಾನೆ ಮತ್ತು ಅದರ ಕೆಳಗಿನಿಂದ ಭಾರತದಲ್ಲಿ ಪ್ರವೇಶಿಸುತ್ತೇವೆಂದು ಎಂದು ಹಸಮತ ಹೇಳಿದನು. ( ಇಂತಹ ಘಟನೆಗಳು ನಡೆಯುತ್ತಿರುವಾಗ ಗಡಿಯಲ್ಲಿ ರಕ್ಷಣೆ ಮಾಡುವ ಗಡಿಭದ್ರತಾ ಪಡೆಯ ಸೈನಿಕರು ಮಲಗಿರುತ್ತಾರೆಯೇ ?- ಸಂಪಾದಕರು)
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!