
ದುರ್ಗ (ಛತ್ತೀಸಗಡ) – ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು. (ಗಡಿಯಲ್ಲಿ ತಂತಿಯನ್ನು ಕತ್ತರಿಸಿ ಬಾಂಗ್ಲಾದೇಶಿಯರಿಗೆ ಭಾರತದಲ್ಲಿ ಪ್ರವೇಶಿಸುವುದು, ಗಡಿಭದ್ರತಾ ಪಡೆಗೆ ಲಜ್ಜಾಸ್ಪದ- ಸಂಪಾದಕರು) `ತದನಂತರ 1 ಸಾವಿರ 500 ರೂಪಾಯಿಗಳಲ್ಲಿ ಆಧಾರ ಕಾರ್ಡ ತಯಾರಿಸಿಕೊಂಡು ದೇಶದ ವಿವಿಧ ಪ್ರದೇಶಗಳಿಗೆ ಹೋಗಿ ನಾವು ಕಳ್ಳತನ ಮಾಡುತ್ತಿದ್ದೆವು’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡರು. (ಇದರಿಂದ ಬಂಗಾಲದಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆಯೆಂದು ಗಮನಕ್ಕೆ ಬರುತ್ತಿದೆ – ಸಂಪಾದಕರು)
ಛತ್ತೀಸಗಡದ ದುರ್ಗ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 6 ರಂದು ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಗಾಲದಿಂದ ಬಂಧಿಸಿದರು. ಮಹಮ್ಮದ ಹಸಮತ ಖಲಿಫಾ ಮತ್ತು ಅಲ್ತಾಫ ಹುಸೇನ ಹೆಸರಿನ ಈ ಇಬ್ಬರು ಆರೋಪಿಗಳಲ್ಲಿ ಮಹಮ್ಮದ ಹಸಮತ ಖಲಿಫಾ ನಾಲ್ಕು ತಿಂಗಳಿನ ಹಿಂದೆ ಭಾರತದಲ್ಲಿ ನುಸುಳಿರುವುದಾಗಿ ಒಪ್ಪಿಕೊಂಡನು. ಗಡಿಯಲ್ಲಿ ನುಸುಳಲು ದಲ್ಲಾಳಿಗೆ 5 ಸಾವಿರ ರೂಪಾಯಿಗಳನ್ನು ನೀಡುತ್ತೇವೆಯೆಂದು ಪೊಲೀಸರಿಗೆ ಹೇಳಿದ. ತದನಂತರ ದಲ್ಲಾಳಿ ಗಡಿಯಲ್ಲಿ ತಂತಿಯನ್ನು ಕತ್ತರಿಸುತ್ತಾನೆ ಮತ್ತು ಅದರ ಕೆಳಗಿನಿಂದ ಭಾರತದಲ್ಲಿ ಪ್ರವೇಶಿಸುತ್ತೇವೆಂದು ಎಂದು ಹಸಮತ ಹೇಳಿದನು. ( ಇಂತಹ ಘಟನೆಗಳು ನಡೆಯುತ್ತಿರುವಾಗ ಗಡಿಯಲ್ಲಿ ರಕ್ಷಣೆ ಮಾಡುವ ಗಡಿಭದ್ರತಾ ಪಡೆಯ ಸೈನಿಕರು ಮಲಗಿರುತ್ತಾರೆಯೇ ?- ಸಂಪಾದಕರು)
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ