‘ಕೇರಳದಲ್ಲಿನ ೩೨ ಸಾವಿರ ಮಹಿಳೆಯರು ಇಸ್ಲಾಂ ಸ್ವೀಕರಿಸಿದ ಬಗ್ಗೆ ಸಾಕ್ಷಿ ನೀಡಿ ಮತ್ತು ಒಂದು ಕೋಟಿ ರೂಪಾಯಿ ಪಡೆಯಿರಿ ! (ಅಂತೆ) – ಕಾಂಗ್ರೆಸ್ ಮುಖಂಡ ಶಶಿ ಥರೂರ

ಮುಂಬರುವ ಚಲನಚಿತ್ರ ‘ದ ಕೇರಳ ಸ್ಟೋರಿ’ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ಥರೂರ ಇವರ ಹಾಸ್ಯಸ್ಪಾದ ಆವಾಹನೆ !

ಕಾಂಗ್ರೆಸ್ ಮುಖಂಡ ಶಶಿ ಥರೂರ

ಮುಂಬಯಿ – ‘ಕೇರಳದಲ್ಲಿ ೩೨ ಸಾವಿರ ಮಹಿಳೆಯರು ಇಸ್ಲಾಂ ಸ್ವೀಕರಿಸಿದ್ದಾರೆ, ಈ ದಾವೆ ಸಾಬೀತಪಡಿಸಲು ಸಾಕ್ಷಿ ನೀಡಿ ಮತ್ತು ಒಂದು ಕೋಟಿ ರೂಪಾಯಿ ಪಡೆಯಿರಿ, ಎಂದು ಕಾಂಗ್ರೆಸ್ ನ ನಾಯಕ ಶಶಿ ಥರೂರ ಇವರು ಬಹಿರಂಗ ಕರೆ ನೀಡಿದ್ದಾರೆ. ಒಂದು ಟ್ವೀಟ್ ಮೂಲಕ ನೀಡಿರುವ ಕರೆಯಲ್ಲಿ ಅವರು ‘ನಾಟ್ ಎ ಕೇರಳ ಸ್ಟೋರಿ’ ಈ ‘ಹ್ಯಾಶ್ ಟ್ಯಾಗ್’ ಉಪಯೋಗಿಸಿದ್ದಾರೆ. ‘ಯಾರಿಗೆ ಆವಾಹನೆ ಸ್ವೀಕರಿಸಿ ಒಂದು ಕೋಟಿ ರೂಪಾಯಿಯ ಬಹುಮಾನ ಪಡೆಯುವುದಿದೆ, ಅವರು ಮೇ ೪ ರಂದು ಕೇರಳದಲ್ಲಿನ ಯಾವುದೇ ಜಿಲ್ಲೆಯಲ್ಲಿನ ಸಾಕ್ಷಿ ಪ್ರಸ್ತುತಪಡಿಸಬಹುದು, ಎಂದು ಥರೂರ ಹೇಳಿದರು.

‘ದ ಕೇರಳ ಸ್ಟೋರಿ’ ಇದು ಮೇ ೫ ರಂದು ಪ್ರಸಾರವಾಗುವ ಚಲನಚಿತ್ರ ದ ಟ್ರೈಲರ್ ನಿಂದ (ಚಲನಚಿತ್ರದಲ್ಲಿನ ಕೆಲವು ಭಾಗದಿಂದ ) ಈಗಂತೂ ರಣುಕಹಳೆ ಮೊಳಗಿದೆ. ‘ಕೇರಳದಲ್ಲಿನ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಹುಡುಗಿಯರನ್ನು ಇಸ್ಲಾಮಿಕ್ ಸ್ಟೇಟ್ ನಲ್ಲಿ ಸಹಭಾಗಿ ಆಗುವುದಕ್ಕಾಗಿ ಬಲವಂತವಾಗಿ ಮತಾಂತರಗೊಳಿಸಿ ದೇಶದ ಹೊರಗೆ ಕಳುಹಿಸಲಾಗಿದೆ’. ಇದರ ವಾಸ್ತವ ಚಿತ್ರಣವನ್ನು ತೋರಿಸುವ ಈ ಚಲನಚಿತ್ರಕ್ಕೆ ರಾಜ್ಯದಲ್ಲಿನ ಕಮ್ಯುನಿಸ್ಟ್ ಸರಕಾರದ ಜೊತೆಗೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸುತ್ತಿದೆ. ಥರೂರ ಇವರು ಮಾತು ಮುಂದುವರಿಸಿ, ಇದು ನಿಮ್ಮ (ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರ) ಕೇರಳದ ಕಥೆ ಇರಬಹುದು. ಇದು ನಮ್ಮ ಕೇರಳದ ಕಥೆಯಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ‘ಥರೂರ ಇವರು ೩೨ ಸಾವಿರ ಮುಸಲ್ಮಾನೆತರ ಮಹಿಳೆಯರ ಮತಾಂತರ ನಡೆದಿಲ್ಲ; ಇದನ್ನು ಸಾಬೀತುಪಡಿಸಿ ತೋರಿಸಿದರೆ ಅವರಿಗೆ ಹತ್ತು ಕೋಟಿ ರೂಪಾಯಿ ನೀಡಲಾಗುವುದು ಇಲ್ಲವಾದರೆ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕು ಎಂದು ಯಾರಾದರು ಆವಾಹನೆ ನೀಡಿದರೆ, ಅದನ್ನು ಸ್ವೀಕರಿಸಲು ಅವರು ಸಿದ್ಧರಿರುವರೇ, ಎಂದು ಅವರು ಮೊದಲು ಹೇಳಬೇಕು !
  • ಕಾಶ್ಮೀರದಲ್ಲಿನ ಲಕ್ಷಾಂತರ ಕಾಶ್ಮೀರಿ ಹಿಂದೂಗಳ ನರಸಂಹಾರ ನಡೆದಾಗ ಚಕಾರವನ್ನೂ ಎತ್ತದ ಥರೂರ ಇವರ ಜಾತ್ಯತೀತತೆ ಅಂದರೆ ಇದೆಯೇ ?
  • ಕಾಂಗ್ರೆಸ್ ತನ್ನ ಪೂರ್ಣ ಸಮಯ ಮುಸಲ್ಮಾನರನ್ನು ಓಲೈಸುವುದರಲ್ಲಿ ಕಳೆದಿದೆ. ಆದ್ದರಿಂದ ಈಗ ಅವರು ರಾಜಕೀಯವಾಗಿ ಅಳಿವಿನ ಅಂಚಿನಲ್ಲಿ ಇರುವುದರಿಂದ ಅವರು ತೆಗೆದುಕೊಂಡಿರುವ ನಿಲುವು ‘ವಿನಾಶಕಾಲೇ ವಿಪರೀತ ಬುದ್ಧಿ’ ಯ ಉದಾಹರಣೆಯಾಗಿದೆ !