ಉಷ್ಣತೆಯಿಂದ ರಕ್ಷಣೆಗಾಗಿ ವೈದ್ಯರಿಂದ ಕಾರಿಗೆ ಸೆಗಣಿ ಲೇಪನ

ಸಗಣಿಯಿಂದ ವಾಹನದ ಒಳಭಾಗದ ವಾತಾವರಣ ತಂಪಾಗಿರುವುದು, ವಾಹನ ತಜ್ಞರ ಪುಷ್ಟೀಕರಣ !

ಹಸುವಿನ ಸಗಣಿ ಲೇಪಿತ ಕಾರಿನೊಂದಿಗೆ ಡಾಕ್ಟರ್

ಭೋಪಾಲ (ಮಧ್ಯಪ್ರದೇಶ) – ರಾಜ್ಯದ ಸಾಗರ ಜಿಲ್ಲೆಯ ತಿಲಕಗಂಜನ `ಜರೂಆಖೇಡಾ ಆರೋಗ್ಯ ಸೇತು’ ಈ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯ ಸುಶೀಲ ಇವರು ತಮ್ಮ `ಮಾರುತಿ ಅಲ್ಟೋ’ ಕಾರಿನಲ್ಲಿ ಬಹಳ ಪ್ರವಾಸ ಮಾಡುತ್ತಾರೆ. ಸಧ್ಯಕ್ಕೆ ಆ ಕ್ಷೇತ್ರದಲ್ಲಿ 41 ಸೆಲ್ಷಿಯಸ್ ಡಿಗ್ರಿ ತಾಪಮಾನವಿದೆ. ಬಿಸಿಲಿನ ಧಗೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಡಾ. ಸುಶೀಲ ತಮ್ಮ ಕಾರಿನ ಹೊರ ಭಾಗಕ್ಕೆ ಸೆಗಣಿಯನ್ನು ಲೇಪಿಸಿದ್ದಾರೆ. ಇದರಿಂದ ಕಾರಿನ ಒಳಗಿನ ತಾಪಮಾನ ತಣ್ಣಗಿರುತ್ತದೆಯೆನ್ನುವುದು ಅವರ ಹೇಳಿಕೆಯಾಗಿದೆ.

(ಸೌಜನ್ಯ : News18 MP Chhattisgarh)

ಡಾ. ಸುಶೀಲರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಈ ಲೇಪನದಿಂದ ಸೂರ್ಯನ ಕಿರಣಗಳು ನೇರವಾಗಿ ಕಾರಿನ ಮೇಲೆ ಬೀಳುವುದಿಲ್ಲ. ಕಾರಿನ ಮೇಲಿನ ಸೆಗಣಿಯ ಲೇಪವು ಆ ಕಿರಣಗಳನ್ನು ಹೀರಿಕೊಳ್ಳುತ್ತವೆ. ಹಾಗೂ ಸಗಣಿಯಿಂದ ವಾಹನಕ್ಕೂ ಯಾವುದೇ ಹಾನಿಯಾಗುವುದಿಲ್ಲ. ವಾಹನ ತಜ್ಞರೂ ಇದನ್ನು ಪುಷ್ಟೀಕರಿಸಿದ್ದಾರೆ. ವಾಹನದ ಹೊರಭಾಗಕ್ಕೆ ಸೆಗಣಿಯ ಲೇಪನ ಮಾಡುವುದರಿಂದ ಒಳಗಡೆ ಉಷ್ಣತೆ ಹೋಗುವುದಿಲ್ಲ. ಇದರಿಂದ ವಾಹನ ಒಳಗಿನಿಂದ ತಣ್ಣಗಿರುತ್ತದೆಯೆಂದು ತಜ್ಞರ ಹೇಳಿಕೆಯಾಗಿದೆ.