ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !

ಪ್ರಯಾಗರಾಜ (ಉತ್ತರಪ್ರದೇಶ ) – ಪೊಲೀಸರ ವಶದಲ್ಲಿರುವಾಗಲೇ ಹತ್ಯೆ ಮಾಡಲಾದ ಕುಖ್ಯಾತ ಗೂಂಡಾ ಅತಿಕ ಅಹಮದ್ ಮತ್ತು ಅಶ್ರಫ್ ಇವರ ಪ್ರಕರಣದಲ್ಲಿ ಅತಿಕನ ಪತ್ನಿ ಶಾಯಿಸ್ತಾಳು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಸಾರ್ವಜನಿಕವಾಗಿದೆ. ಇದರಲ್ಲಿ, ‘ಅತಿಕ ಮತ್ತು ಅಶ್ರಫ್ ಇವರ ಹತ್ಯೆಯ ಷಡ್ಯಂತ್ರ ಅವರು ಪೊಲೀಸ ಕೊಠಡಿಯಲ್ಲಿ ಇರುವಾಗಲೇ ರೂಪಿಸಲಾಗಿತ್ತು. ಇದರಲ್ಲಿ ಹಿರಿಯ ಅಧಿಕಾರಿಗಳು ಸೇರಿದ್ದಾರೆ. ವಿಚಾರಣೆಯ ನೆಪದಲ್ಲಿ ಅವರನ್ನು ಹೊರಗೆ ಕರೆಸಿ ಹತ್ಯೆ ಮಾಡಿದ್ದರೆ’, ಎಂದು ಹೇಳಲಾಗಿದೆ. ವಿಶೇಷವೆಂದರೆ ಉಮೇಶ ಪಾಲ ಹತ್ಯೆಯ ಪ್ರಕರಣದ ನಂತರ ಅತಿಕನ ಪತ್ನಿ ಶಾಯಿಸ್ತಾ ನಾಪತ್ತೆ ಆಗಿದ್ದಳು. ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ.
सामने आई #AtiqAhmed की बीवी #ShaistaParveen की #CMYogi को लिखी चिट्ठी, जानिए क्या क्या लिखा है चिट्ठी में?
— GNTTV (@GoodNewsToday) April 18, 2023
ಉಮೇಶ ಪಾಲ ಇವರ ಹತ್ಯೆಯ ೩ ದಿನದ ನಂತರ ಅಂದರೆ ಫೆಬ್ರವರಿ ೨೭ ರಂದು ಬರೆದಿರುವ ಪತ್ರದಲ್ಲಿ ಶಾಯಿಸ್ತಾ ಇವಳು ಓರ್ವ ಸಚಿವರು ಹತ್ಯೆಯ ಷಡ್ಯಂತ್ರ ರೂಪಿಸಿದ್ದರು ಮತ್ತು ಪೊಲೀಸ್ ಅಧಿಕಾರಿಯು ಹತ್ಯೆಯ ಗುತ್ತಿಗೆ ಪಡೆದಿದ್ದರು ಎಂದು ಹೇಳಿದ್ದರು.

‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ