ಭಯೋತ್ಪಾದಕ ದಾಳಿಯಾಗಿರದೇ ಆಂತರಿಕ ವಿವಾದದಿಂದ ನಡೆದಿರುವ ಘಟನೆ ಎಂದು ದಾವೆ

ಭಟಿಂಡಾ (ಪಂಜಾಬ) – ಇಲ್ಲಿಯ ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಇದು ಭಯೋತ್ಪಾದಕ ದಾಳಿಯಾಗಿರದೇ ಈ ಗುಂಡಿನ ದಾಳಿ ಆಂತರಿಕ ವಿವಾದದಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ನಡೆಸುವವರು ಸಾಮಾನ್ಯ ಉಡುಪಿನಲ್ಲಿ ಇದ್ದರು. ಪಂಜಾಬ್ ಪೋಲಿಸರ ಮೂಲಗಳ ಪ್ರಕಾರ, ೨ ದಿನಗಳ ಹಿಂದೆ ಒಂದು ರೈಫಲ್ ಮತ್ತು ೨೮ ಗುಂಡುಗಳು ನಾಪತ್ತೆಯಾಗಿದ್ದವು. ಈ ಘಟನೆಯ ಹಿಂದೆ ಸೈನ್ಯದಲ್ಲಿ ಯಾರಾದರೂ ಇರಬಹುದು, ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
೧. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಈ ಘಟನೆಯ ಬಗ್ಗೆ ಸೈನ್ಯದಿಂದ ವರದಿ ಕೇಳಿದ್ದಾರೆ. ಪಂಜಾಬ್ ಸರಕಾರವು ಭಟಿಂಡಾ ಪೊಲೀಸರಿಂದ ಕೂಡ ವರದಿ ಕೇಳಿದೆ. ಈ ಮಿಲಿಟರಿ ಸ್ಟೇಷನ್ ನಲ್ಲಿ ಸೈನಿಕರ ಕುಟುಂಬದವರು ವಾಸಿಸುತ್ತಾರೆ. ಈ ಘಟನೆಯ ನಂತರ ಸೈನ್ಯದಿಂದ ಎಲ್ಲರಿಗೂ ತಮ್ಮ ತಮ್ಮ ಮನೆಯಲ್ಲಿ ಇರಲು ಹೇಳಲಾಗಿದೆ. ಶಾಲೆಗಳು ಕೂಡ ಮುಚ್ಚಲಾಗಿದೆ.
೨. ಭಟಿಂಡಾ ನೆಲೆ ಇದು ಏಷ್ಯಾ ಖಂಡದಲ್ಲೇ ಎಲ್ಲಕ್ಕಿಂತ ದೊಡ್ಡ ಮಿಲಿಟರಿ ಸ್ಟೇಷನ್ ಆಗಿದೆ. ಈ ಸ್ಟೆಷನ್ ನ ಗಡಿ ಸುಮಾರು ೪೫ ಕಿಲೋಮೀಟರ್ ಇದೆ. ಇಲ್ಲಿರುವ ಗುಂಡು ಮದ್ದು ಸಂಗ್ರಹವು ದೇಶದಲ್ಲಿನ ಎಲ್ಲಕ್ಕಿಂತ ದೊಡ್ಡ ಡಿಪೋಗಳಲ್ಲಿ ಒಂದಾಗಿರುವುದು ಎಂದು ಹೇಳಲಾಗುತ್ತಿದೆ.
Four #Army jawans killed in firing inside #Bathinda military station; search ops on#Punjab | #DNAVideos
For more videos, click here https://t.co/6ddeGFqM3o pic.twitter.com/oGdev4je2X
— DNA (@dna) April 12, 2023
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!