`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಸವಿ ೨೦೧೨ ರಿಂದ ೨೦೨೨ ರ ಅವಧಿಯಲ್ಲಿ ೧೦ `ಅಖಿಲ ಭಾರತೀಯ ಹಿಂದು ರಾಷ್ಟ ಅಧಿವೇಶನ’ವು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂರಾಷ್ಟ ಅಧಿವೇಶನ’)ವನ್ನು ಆಯೋಜಿಸಲಾಗಿದೆ. ಗೋವಾದಲ್ಲಿ ನೆರವೇರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅಧಿವೇಶನದಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಸಿಂಗಾಪುರ, ಬ್ಯಾಂಕಾಕ್, ಅಮೇರಿಕಾ, ಫಿಜಿ, ಆಸ್ಟ್ರೇಲಿಯಾ, ಹಾಂಕಕಾಂಗ್, ಇಂಗ್ಲೆಂಡ್, ಮಲೇಶಿಯಾ ಇತ್ಯಾದಿ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಅಧಿವೇಶನದ ಆಯೋಜನೆಗಾಗಿ ಧರ್ಮದಾನ ಮಾಡುವುದಕ್ಕಾಗಿ ವಿನಂತಿ !

ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರ ಹಸ್ತದಿಂದ ದಾನವನ್ನು ಮಾಡಬೇಕು. ಈ ಧರ್ಮದಾನದ ಮೇಲೆ `೮೦ ಜಿ (೫)’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹಿಂದೂ ಜನಜಾಗೃತಿ ಸಮಿತಿ’ (Hindu Janajagruti Samiti) ಯ ಹೆಸರಿನಲ್ಲಿ ಧನಾದೇಶವನ್ನು ಸ್ವೀಕರಿಸಲಾಗುವುದು.

ಅಧಿವೇಶನಕ್ಕಾಗಿ ಕೆಳಗಿನ ಕೊಂಡಿಯ ಮೂಲಕ ಅರ್ಪಣೆಯನ್ನು ಮಾಡಬಹುದು.
https://www.hindujagruti.org/summit/donate

ಸಂಪರ್ಕ : ೯೫೭೯೨೮೮೦೧೦