ರಾಜ್ಯದಲ್ಲಿ 1 ಸಾವಿರ ಅಕ್ರಮ ಗೋರಿಗಳ ಮೇಲೆ ಕ್ರಮ ! – ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಡೆಹರಾಡೂನ (ಉತ್ತರಾಖಂಡ) – ಭೂಮಿ ಜಿಹಾದ್ ಇರಲಿ ಅಥವಾ ಗೋರಿ ಜಿಹಾದ ಇರಲಿ, ದೇವಭೂಮಿ ಉತ್ತರಾಖಂಡದಲ್ಲಿ ಕಾನೂನಿನ ವಿರುದ್ಧ ಯಾವುದೇ ಕಾರ್ಯ ನಡೆಯಲು ಬಿಡುವುದಿಲ್ಲ. ನಾವು ರಾಜ್ಯದ 1 ಸಾವಿರ ಸ್ಥಳಗಳ ಸಮೀಕ್ಷೆ ನಡೆಸಿದ್ದೇವೆ. ಈ ಸ್ಥಳಗಳಲ್ಲಿ ಅತಿಕ್ರಮಣ ನಡೆಸಿ ಗೋರಿಗಳನ್ನು ಕಟ್ಟಲಾಗಿದೆ. ಒಂದು ವೇಳೆ ಸಂಬಂಧಿಸಿದವರು ಮುಂಬರುವ 6 ತಿಂಗಳಿನಲ್ಲಿ ಅವುಗಳನ್ನು ತಾವಾಗಿಯೇ ತೆಗೆದು ಹಾಕದಿದ್ದರೆ, ಸರಕಾರವು ಆ ಗೋರಿಗಳ ಮೇಲೆ ಸೂಕ್ತ ಕ್ರಮ ನಡೆಸಲಿದೆಯೆಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸರಕಾರಿ ಭೂಮಿಯ ಮೇಲೆ ಅನಧಿಕೃತವಾಗಿ ಗೋರಿ ಕಟ್ಟಲಾಗಿರುವುದು ಬಹಿರಂಗವಾದ ಬಳಿಕ ಮುಖ್ಯಮಂತ್ರಿಗಳು ಈ ಹೇಳಿಕೆಯನ್ನು ನೀಡಿದ್ದಾರೆ. ಸರಕಾರವು ಇಂತಹ ಅನಧಿಕೃತ ಗೋರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕಳೆದ 20 ವರ್ಷಗಳಲ್ಲಿ ಈ ಗೋರಿಗಳನ್ನು ಕಟ್ಟಲಾಗಿದೆಯೆಂದು ಕಂಡುಬಂದಿದೆ. ಈ ಗೋರಿಗಳಲ್ಲಿ ಕೆಲವು ಗೋರಿಗಳ ಮೇಲೆ ಕ್ರಮ ಕೈಕೊಂಡಾಗ ಅವುಗಳ ಬುಡದಲ್ಲಿ ಯಾವುದೇ ಮಾನವ ಅವಶೇಷಗಳು ಕಂಡು ಬರಲಿಲ್ಲ. ಇದರರ್ಥ ಅವು ಸುಳ್ಳು ಗೋರಿಗಳಾಗಿದ್ದು, ಕೇವಲ ಭೂಮಿಯನ್ನು ಕಬಳಿಸುವ ಸಲುವಾಗಿಯೇ ಅವುಗಳನ್ನು ಕಟ್ಟಲಾಗಿದೆಯೆಂದು ಬಹಿರಂಗವಾಗಿದೆ. ಡಿಸೆಂಬರ 2022 ರಿಂದ ಮಾರ್ಚ 2023 ಈ ಕಾಲಾವಧಿಯಲ್ಲಿ 41 ಅನಧಿಕೃತ ಗೋರಿಗಳನ್ನು ಸರಕಾರದಿಂದ ಧ್ವಂಸಗೊಳಿಸಲಾಗಿದೆ.

ಸಂಪಾದಕೀಯ ನಿಲುವು

  • ಇಷ್ಟು ದೊಡ್ಡ ಪ್ರಮಾಣದಲ್ಲಿ ಗೋರಿಗಳನ್ನು ಕಟ್ಟುವವರೆಗೆ ಸರಕಾರವೇನು ಮಲಗಿತ್ತೇ ? ಇದಕ್ಕೆ ಜವಾಬ್ದಾರರಾಗಿರುವವರ ಮೇಲೆಯೂ ಕಠಿಣ ಕೈಕೊಳ್ಳಬೇಕು !
  • ಕೇವಲ ಒಂದು ರಾಜ್ಯದಲ್ಲಿ ಇಷ್ಟು ಅಕ್ರಮ ಗೋರಿಗಳಿದ್ದರೆ, ಸಂಪೂರ್ಣ ದೇಶದಲ್ಲಿ ಎಷ್ಟು ಇರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ ! ಇಂತಹ ಎಲ್ಲ ಅಕ್ರಮ ಗೋರಿಗಳ ಮೇಲೆ ಯಾವಾಗ ಕ್ರಮ ಕೈಕೊಳ್ಳಲಾಗುವುದು ?