ಉದಯಪುರ (ರಾಜಸ್ಥಾನ) ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜ ಹಾರಾಟ ನಿಷೇಧ

ಸಾಂದರ್ಭಿಕ ಚಿತ್ರ

ಉದಯಪುರ (ರಾಜಸ್ಥಾನ) – ಉದಯಪುರ ಜಿಲ್ಲಾಧಿಕಾರಿ ತಾರಾಚಂದ್ ಮೀಣಾ ಅವರು ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ ಹಾಗೂ ಸಂಚಾರ ನಿಷೇಧದ ಆದೇಶವನ್ನೂ ಹೊರಡಿಸಿದ್ದಾರೆ. ಈ ನಿಷೇಧವು ೨ ತಿಂಗಳವರೆಗೆ ಇರುತ್ತದೆ. ಹನುಮಾನ ಜಯಂತಿಯ ಹಿಂದಿನ ದಿನ ಈ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ರಾಜಕೀಯ ಕಟ್ಟಡಗಳು, ಸರಕಾರಿ ಕಚೇರಿಗಳು, ಸಾರ್ವಜನಿಕ ಉದ್ಯಾನವನಗಳು, ವೃತ್ತಗಳು, ವಿದ್ಯುತ್ ದೀಪದ ಕಂಬಗಳು, ಟೆಲಿಫೋನ್ ಕಂಬಗಳು ಇತ್ಯಾದಿಗಳಲ್ಲಿ ಈ ಧ್ವಜಗಳನ್ನು ನೇತುಹಾಕುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ?

ಭಾರತದ ಬಹುಸಂಖ್ಯಾತ ಹಿಂದೂಗಳು ವರ್ಷವಿಡೀ ಅನೇಕ ಹಬ್ಬಗಳನ್ನು ಮತ್ತು ಉತ್ಸವಗಳನ್ನು ಆಚರಿಸುವಾಗ, ಈ ನಿಷೇಧವು ಹಿಂದೂಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದರಿಂದ, ಹಿಂದೂಗಳು ಕಾನೂನುಬದ್ಧವಾಗಿ ಪ್ರತಿಭಟಿಸುವ ಅವಶ್ಯಕತೆ ಇದೆ !