ಸತತ ಎರಡನೇ ದಿನ ೩ ಸಾವಿರ ಹೊಸ ರೋಗಿಗಳು !

ನವ ದೆಹಲಿ – ದೇಶದಲ್ಲಿ ಕೊರೊನಾ ಪ್ರಸರಣದ ವೇಗ ದ್ವಿಗುಣಗೊಂಡಿದೆ. ಮಾರ್ಚ್ ೩೦ ರಂದು, ಅಂದರೆ ಸತತ ಎರಡನೇ ದಿನ, ದೇಶದಲ್ಲಿ ೩ ಸಾವಿರದ ೯೫ ನಾಗರಿಕರು ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ . ಈ ದಿನ ೫ ಜನರು ಸಾವನ್ನೊಪ್ಪಿದ್ದಾರೆ ಮತ್ತು ೧ ಸಾವಿರ ೩೯೬ ಜನರು ಚೇತರಿಸಿಕೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಕೇರಳ ರಾಜ್ಯದವರಾಗಿದ್ದರೆ, ತಲಾ ಒಬ್ಬರು ಗುಜರಾತ್ ಮತ್ತು ಗೋವಾ ರಾಜ್ಯದವರು. ಪ್ರಸ್ತುತ ದೇಶದಲ್ಲಿ ೧೫ ಸಾವಿರದ ೨೦೮ ನಾಗರಿಕರು ಕರೋನಾದಿಂದ ಪೀಡಿತರಾಗಿದ್ದಾರೆ.
೬ ತಿಂಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ೩ ಸಾವಿರ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ವಾರ, ಕರೋನಾ ಸೋಂಕಿನ ದೈನಂದಿನ ಸರಾಸರಿ ೧ ಸಾವಿರ ೫೦೦ ಆಗಿತ್ತು. ಈ ಹಿಂದೆ ಅಕ್ಟೋಬರ್ ೨, ೨೦೨೨ ರಂದು ೩ ಸಾವಿರದ ೩೭೫ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.
India reports over 3,000 COVID cases for second consecutive day
Read @ANI Story | https://t.co/kOnuAVFqFh#COVID19 #coronavirus #COVID19india pic.twitter.com/Ujf3uetEYU
— ANI Digital (@ani_digital) March 31, 2023
(ಸೌಜನ್ಯ : DNA INDIA)
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!