ಪಾಂಡಿಚೇರಿದಲ್ಲಿ ಭಾಜಪ ಕಾರ್ಯಕರ್ತನ ಕೊಲೆ !

ಹಿಂದೆ ಕೇವಲ ಬಂಗಾಲ ಮತ್ತು ಕೇರಳ ರಾಜ್ಯದಲ್ಲಿ ಭಾಜಪದ ಕಾರ್ಯಕರ್ತರ ಕೊಲೆಯಾಗುತ್ತಿತ್ತು; ಆದರೆ ಈಗ ಎಲ್ಲಾ ಕಡೆ ಆಗುತ್ತಿದೆ. ಅದನ್ನು ತಡೆಯುವುದಕ್ಕಾಗಿ ಕೇಂದ್ರದಲ್ಲಿರುವ ಭಾಜಪ ಸರಕಾರ ಕ್ರಮಕೈಗೊಳ್ಳಬೇಕು !

ಪಾಂಡಿಚೇರಿ – ರಾಜ್ಯದ ಗೃಹ ಸಚಿವ ನಮಚಿವಯಮ ಇವರ ಸಂಬಂಧಿಕ ಹಾಗೂ ಭಾಜಪದ ಕಾರ್ಯಕರ್ತ ಸೆಂಥಿಲ ಕುಮಾರನ ಕೊಲೆ ಮಾಡಲಾಯಿತು. ಸೆಂಥಿಲ ಕುಮಾರ ಬೇಕರಿಯ ಹತ್ತಿರ ನಿಂತಿರುವಾಗ ಬೈಕ್ ಗಳಲ್ಲಿ ಬಂದ ೭ ಜನರು ಅವರ ಮೇಲೆ ನಾಡ ಬಾಂಬ್ ಎಸೆದರು. ಆದ್ದರಿಂದ ಸೆಂಥಿಲ್ ಕುಮಾರ ಕೆಳಗೆ ಬಿದ್ದರು. ನಂತರ ಆರೋಪಿಗಳು ಅವರಿಗೆ ಲಾಠಿಯಿಂದ ಅಮಾನುಷವಾಗಿ ಥಳಿಸಿ ಕೊಲೆ ಮಾಡಿದ್ದಾರೆ. ಮಾರ್ಚ್ ೨೬ ರಂದು ರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದೂ ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಿಲ್ಲ. ಹಾಗೂ ಈ ಕೊಲೆಯ ಹಿಂದಿನ ಕಾರಣ ಕೂಡ ಸ್ಪಷ್ಟವಾಗಿಲ್ಲ.

(ಸೌಜನ್ಯ : News18 Kannada)